ಪಾನಮತ್ತ ಯೋಧ ಹಾರಿಸಿದ ಗುಂಡಿಗೆ ಇಬ್ಬರು ಬಲಿ
Team Udayavani, Dec 11, 2019, 1:06 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ರಾಂಚಿ: ಜಾರ್ಖಂಡ್ನಲ್ಲಿ ಸೋಮವಾರ ರಾತ್ರಿ ಸಿಆರ್ಪಿಎಫ್ ಯೋಧರೊಬ್ಬರು ಪಾನಮತ್ತರಾಗಿ ತಮ್ಮ ಸಹೋದ್ಯೋಗಿ ಯೋಧ ಮತ್ತು ಅಧಿಕಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಬಾಕಾರೊ ಪ್ರದೇಶದ ಚಾರ್ಲಿ ಕಂಪೆನಿಯಲ್ಲಿ ಈ ಘಟನೆ ನಡೆದಿದೆ.
ಚುನಾವಣಾ ಭದ್ರತಾ ಕಾರ್ಯಕ್ಕಾಗಿ ಯೋಧರನ್ನು ನೇಮಿಸಲಾಗಿತ್ತು. ಗುಂಡಿನ ದಾಳಿ ಮಾಡಿರುವ ಪೇದೆಯನ್ನು ದೀಪೇಂದರ್ ಯಾದವ್ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಲು ನಿರ್ದಿಷ್ಟ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.