ಪಕ್ಷಾಂತರ ಹೆಚ್ಚು ನಲುಗಿದ್ದೇ ಕಾಂಗ್ರೆಸ್!
4 ವರ್ಷ ಗಳಲ್ಲಿ "ಕೈ'ಕೊಟ್ಟವರು 170 ಶಾಸಕರು! , ಬಿಜೆಪಿಗೆ ಸೇರಿದವರೇ ಹೆಚ್ಚು
Team Udayavani, Mar 12, 2021, 7:10 AM IST
“ಪಕ್ಷಾಂತರ’…! ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಲು, ಆಡಳಿತ ಚಿತ್ರಣವನ್ನೇ ಬದಲಿಸಲು ಬಳಕೆ ಆಗುತ್ತಿರುವ ಈ ಅಸ್ತ್ರ ಇಂದು ಸರ್ವೇಸಾಮಾನ್ಯ. 4 ವರ್ಷಗಳಲ್ಲಿ ಪಕ್ಷಾಂತರದಿಂದಾಗಿ ಹೆಚ್ಚು ನಲುಗಿದ ಪಕ್ಷ ಕಾಂಗ್ರೆಸ್! ಈ ಅವಧಿಯಲ್ಲಿ ಒಟ್ಟು 170 ಶಾಸಕರು “ಕೈ’ಗೆ ಗುಡ್ಬೈ ಹೇಳಿದ್ದಾರೆ ಎನ್ನುತ್ತಿದೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ವರದಿ.
ಬಿಜೆಪಿಗೆ ಅಧಿಕ ಸೇರ್ಪಡೆ :
2016-20ರ ಅವಧಿಯಲ್ಲಿ ಶಾಸಕರ ಪಕ್ಷಾಂತರದಿಂದಾಗಿ ಒಟ್ಟು 405 ಮರುಚುನಾವಣೆಗಳು ನಡೆದಿವೆ. ವಿವಿಧ ಪಕ್ಷಗಳ 182 ಶಾಸಕರು ಬಿಜೆಪಿಗೆ, 38 ಮಂದಿ ಕಾಂಗ್ರೆಸ್ಗೆ, 25 ಶಾಸಕರು ಟಿಆರ್ಎಸ್ಗೆ ಸೇರಿದ್ದಾರೆ.
ಕಾಂಗ್ರೆಸ್ಗೆ ಕೈ ಕೊಟ್ಟವರೇ ಹೆಚ್ಚು! :
4 ವರ್ಷಗಳಲ್ಲಿ ಕಾಂಗ್ರೆಸ್ 170 ಶಾಸಕ ರನ್ನು ಕೇವಲ ಪಕ್ಷಾಂತರದಿಂದಲೇ ಕಳೆದು ಕೊಂಡಿದೆ. 18 ಶಾಸಕರು ಮಾತ್ರ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉರುಳಿದ ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಸರಕಾರಗಳಿಂದಾಗಿ ಕಾಂಗ್ರೆಸ್ ತೀವ್ರ ಪಕ್ಷಾಂತರ ನಷ್ಟ ಅನುಭವಿಸಿದೆ.
ರಾಜ್ಯದಲ್ಲೂ ಕೈಗೆ ಹೊಡೆತ :
ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಾಂತರದ ಹೊಡೆತ ತಿಂದಿದೆ. 2019ರಲ್ಲಿ ರಾಜ್ಯದ 15 ಮಂದಿ ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದರು. ವಿಶೇಷವೆಂದರೆ ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಕೆಲವರೂ ಪಕ್ಷಾಂತರ ಮಾಡಿಬಿಟ್ಟಿದ್ದರು. ಇವರ ಪಕ್ಷಾಂತರ ಕಾರಣದಿಂದಾಗಿ ರಾಜ್ಯದಲ್ಲಿದ್ದ ಜೆಡಿಎಸ್ – ಕಾಂಗ್ರೆಸ್ ಸರಕಾರ ಪತನ ಹೊಂದಿತ್ತು.
ಕಾಂಗ್ರೆಸ್ ತೊರೆದ ಪ್ರಮುಖರು :
ಮಾಜಿ ಸಿಎಂಗಳು: ವಿಜಯ ಬಹುಗುಣ (ಉತ್ತರಾಖಂಡ), ಅಜಿತ್ ಜೋಗಿ (ಛತ್ತೀಸ್ಗಢ).
ಮಾಜಿ ಕೇಂದ್ರ ಸಚಿವರು:
ಎಸ್.ಎಂ. ಕೃಷ್ಣ (ಕರ್ನಾಟಕ), ಜ್ಯೋತಿರಾದಿತ್ಯ ಸಿಂಧಿಯಾ (ಮ.ಪ್ರದೇಶ), ಜಿ.ಕೆ. ವಾಸನ್ (ತ.ನಾ), ಕಿಶೋರ್ ಚಂದ್ರ ಡಿಯೊ (ಆಂಧ್ರ), ಜಯಂತಿ ನಟರಾಜನ್ (ತ.ನಾ.), ಶ್ರೀಕಾಂತ್ ಜೆನಾ (ಒಡಿಶಾ), ಶಂಕರ್ ಸಿನ್ಹ ವಘೇಲಾ (ಗುಜರಾತ್)
ಸಂಸದರೂ ಕಮ್ಮಿಯಿಲ್ಲ ! :
2019ರ ಸಂಸತ್ ಚುನಾವಣೆ ವೇಳೆ ಬಿಜೆಪಿಯ ಐವರು ಸಂಸದರು ಪಕ್ಷ ತೊರೆದಿದ್ದರು. 4 ವರ್ಷದಲ್ಲಿ ಕಾಂಗ್ರೆಸ್ನ 7 ರಾ. ಸಭಾ ಸದಸ್ಯರು ವಿವಿಧ ಪಕ್ಷ ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು