ಒಂದೇ ಬಾರಿ ಎರಡು ಡಿಗ್ರಿ ಮಾಡಿ!
ಯುಜಿಸಿಯಿಂದ ಅಧ್ಯಯನ 2012ರಲ್ಲಿಯೂ ಚಾಲ್ತಿಗೆ ಬಂದಿತ್ತು
Team Udayavani, Jul 22, 2019, 6:00 AM IST
ಹೊಸದಿಲ್ಲಿ: ಒಂದು ಕೋರ್ಸ್ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್ ಮಾಡುವ ಆಸೆ ಹಲವು ವಿದ್ಯಾರ್ಥಿಗಳಲ್ಲಿ ಇರುತ್ತದೆಯಾದರೂ ಸದ್ಯದ ಶಿಕ್ಷಣ ನೀತಿಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇಂತಹ ಆಸೆ ಹಾಗೂ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಶುಭ ಸುದ್ದಿ ನೀಡಿದೆ. ಒಂದೇ ಬಾರಿಗೆ ಹಲವು ಕೋರ್ಸ್ ಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಸದ್ಯ ಯುಜಿಸಿ ಅಧ್ಯಯನ ನಡೆಸುತ್ತಿದೆ.
ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ನೇತೃತ್ವದಲ್ಲಿ ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಬೇರೆ ವಿಶ್ವವಿದ್ಯಾಲಯದಿಂದ ಒಂದೇ ಬಾರಿಗೆ ಎರಡು ಡಿಗ್ರಿ ಮಾಡುವ ಸಾಧ್ಯತೆ ಬಾಧ್ಯತೆಗಳ ಅಧ್ಯಯನ ನಡೆಸಲಿದೆ. ಈ ಕೋರ್ಸ್ಗಳನ್ನು ದೂರ ಶಿಕ್ಷಣ, ಆನ್ಲೈನ್ ವಿಧಾನ ಅಥವಾ ಅರೆಕಾಲಿಕ ವಿಧಾನದಲ್ಲಿ ಮಾಡಬಹುದಾಗಿದೆ.
ಅಂದಹಾಗೆ ಇದು ಹೊಸ ಆಲೋ ಚನೆಯಲ್ಲ. 2012ರಲ್ಲೂ ಇದೇ ರೀತಿಯ ಯೋಜನೆ ಯುಜಿಸಿ ಮುಂದೆ ಇತ್ತು. ಸಮಿತಿ ರಚನೆ ಮಾಡಿ, ಅಧ್ಯಯನ ನಡೆಸಿದ ಅನಂತರ ಕೈಬಿಡಲಾಗಿತ್ತು. ಆದರೆ ಈಗ ಮತ್ತೂಮ್ಮೆ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಒಂದು ತಿಂಗಳ ಹಿಂದೆಯೇ ಸಮಿತಿ ರಚನೆಯಾಗಿದ್ದು, ಸಮಿತಿ ಈಗಾಗಲೇ ಒಮ್ಮೆ ಸಭೆಯನ್ನೂ ಸೇರಿದೆ. ಶಿಕ್ಷಣ ಕ್ಷೇತ್ರದ ವಿವಿಧ ಸ್ತರದ ಪರಿಣತರ ಸಲಹೆಯನ್ನು ಈ ಬಗ್ಗೆ ಪಡೆಯಲಾಗುತ್ತಿದೆ ಎಂದು ಯುಜಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
2012ರಲ್ಲಿ ನಿರಾಕರಣೆ
ಒಂದು ಹೆಚ್ಚುವರಿ ಪದವಿ ಕೋರ್ಸ್ಗೆ ವಿದ್ಯಾರ್ಥಿ ಸೇರಿಕೊಳ್ಳಲು ಅವಕಾಶವನ್ನು ನೀಡಬಹುದು. ಅದು ಕೂಡ ಮುಕ್ತ ಅಥವಾ ದೂರಶಿಕ್ಷಣ ವಿಧಾನದಲ್ಲಿ ಮಾತ್ರ ಈ ಅವಕಾಶ ನೀಡಬಹುದು ಎಂದು 2012ರಲ್ಲಿ ಹೈದರಾಬಾದ್ ವಿವಿ ಉಪಕುಲಪತಿ ಫುರ್ಖನ್ ಖಮರ್ ನೇತೃತ್ವದಲ್ಲಿ ಸಮಿತಿ ನೀಡಿದ್ದ ವರದಿ ಹೇಳಿತ್ತು. ಸಾಮಾನ್ಯ ಶಿಕ್ಷಣ ವಿಧಾನದಲ್ಲಿ ಈ ಅವಕಾಶ ನೀಡಿದರೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸಮಸ್ಯೆ ಎದುರಾಗುತ್ತದೆ. ಸಾಮಾನ್ಯ ವಿಧಾನದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಗರಿಷ್ಠ ಒಂದು ಸರ್ಟಿಫಿಕೆಟ್, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಅನ್ನು ಸಾಮಾನ್ಯ ಅಥವಾ ಮುಕ್ತ ಮತ್ತು ದೂರಶಿಕ್ಷಣ ವಿಧಾನದಲ್ಲಿ ಮಾಡಲು ಅವಕಾಶ ನೀಡಬಹುದು.
ಸಮಿತಿ ವರದಿಯ ಅನಂತರ ಯುಜಿಸಿ ಇದನ್ನು ತಳ್ಳಿಹಾಕಿತ್ತು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದೆ. ಸಾಮಾನ್ಯ ಪದವಿ ವ್ಯಾಸಂಗ ಮಾಡು ತ್ತಿರುವ ವಿದ್ಯಾರ್ಥಿಗಳು ವಿಶೇಷ ಕೋರ್ಸ್ ಅಭ್ಯಾಸಕ್ಕೂ ಬಯಸು ತ್ತಾರೆ. ಹೀಗಾಗಿ ಮತ್ತೂಮ್ಮೆ ಇದರ ಸಾಧಕ ಬಾಧಕ ಅಧ್ಯಯನ ಕೈಗೊ ಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ