ವಿಜಯ ಜ್ಯೋತಿಗೆ ಚಾಲನೆ
ಕಾರ್ಗಿಲ್ ವಿಜಯದ 20ನೇ ವಾರ್ಷಿಕೋತ್ಸವ ಶುರು
Team Udayavani, Jul 15, 2019, 5:04 AM IST
ಹೊಸದಿಲ್ಲಿ: ಕಾರ್ಗಿಲ್ ವಿಜಯದ ನೆನಪಿಗಾಗಿ ದೇಶಾದ್ಯಂತ ಸಂಚರಿಸಲಿರುವ ವಿಜಯ ಜ್ಯೋತಿಗೆ ರವಿವಾರ ಹೊಸದಿಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಚಾಲನೆ ನೀಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಜಯ ಜ್ಯೋತಿಗೆ ಚಾಲನೆ ನೀಡಿದರು. ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
11 ನಗರಗಳು ಮತ್ತು ಪಟ್ಟಣಗಳ ಮೂಲಕ ಹಾದುಹೋಗ ಲಿರುವ ವಿಜಯ ಜ್ಯೋತಿ ಅಂತಿಮವಾಗಿ ಜಮ್ಮುವಿನ ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತಲುಪಲಿದೆ. ಬೈಕ್ನಲ್ಲಿ ಯೋಧರ ತಂಡ ಈ ಜ್ಯೋತಿ ಒಯ್ಯಲಿದೆ. ಇದರೊಂದಿಗೆ ಕಾರ್ಗಿಲ್ ವಿಜಯವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.