ಪಂಚರಾಜ್ಯ ಚುನಾವಣೆ:ಸಮೀಕ್ಷೆಗಳಿಗೆ 1 ತಿಂಗಳು ಬ್ರೇಕ್ ಹಾಕಿದ ಚು.ಆಯೋಗ
Team Udayavani, Nov 10, 2018, 12:53 PM IST
ಹೊಸದಿಲ್ಲಿ: ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಶುಕ್ರವಾರ ಚುನಾವಣಾ ಆಯೋಗ ನಿಷೇಧ ಹೇರಿದೆ.
1ತಿಂಗಳ ಕಾಲ ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಹೇಳಿದ್ದು, ನವೆಂಬರ್ 12 ರ ಸಂಜೆ 5.30 ರಿಂದ ಡಿಸೆಂಬರ್ 7 ರ ವರೆಗೆ ಸುದ್ದಿ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸಬಾರದು ಎಂದು ಆದೇಶ ಹೊರಡಿಸಿದೆ.
ಛತ್ತೀಸ್ಗಡದಲ್ಲಿ 2ಹಂತದಲ್ಲಿ ನವೆಂಬರ್ 12 ಮತ್ತು 30 ರಂದು, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್ 26 ರಂದು , ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.
1951 ರ ಜನಪ್ರತಿನಿಧಿ ಕಾಯಿದೆಯ ಅನ್ವಯ ಸಮೀಕ್ಷೆಗಳಿಗೆ ಆಯೋಗ ಬ್ರೇಕ್ ಹಾಕಿದೆ.