ನೋಟು ಅಪಮೌಲ್ಯದ ಮಾಹಿತಿ ನೀಡಿ
Team Udayavani, May 29, 2017, 1:13 PM IST
ಹೊಸದಿಲ್ಲಿ: ನೋಟುಗಳ ಅಪಮೌಲ್ಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಾರ್ವಜನಿಕರಿಗೆ ನೀಡುವುದು ಪ್ರತಿಯೊಂದು ಸರಕಾರಿ ಇಲಾಖೆಯ ಕರ್ತವ್ಯವಾಗಿದೆ. ಹಾಗಾಗಿ, ನೋಟು ಅಮಾನ್ಯ ನಿರ್ಧಾರದ ಹಿಂದಿನ ಕಾರಣಗಳು, ಅದರ ಅಂಕಿ ಅಂಶಗಳನ್ನು ಇಲಾಖೆಗಳು ಬಹಿರಂಗಪಡಿಸಬೇಕು ಎಂಬ ಸ್ಪಷ್ಟ ಸೂಚನೆಧಿಯನ್ನು ಕೇಂದ್ರ ಮಾಹಿತಿ ಆಯೋಗ ರವಿವಾರ ನೀಡಿದೆ. ಅಪನಗದೀಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಆರ್ಟಿಐ ಅರ್ಜಿಗಳನ್ನು ಕೇಂದ್ರ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ನೆಪಗಳನ್ನು ಹೇಳಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಆಯೋಗದ ಈ ಸೂಚನೆ ಮಹತ್ವ ಪಡೆದಿದೆ. ಜನರಿಂದ ಮಾಹಿತಿಯನ್ನು ಮುಚ್ಚಿಡಲು ನಡೆಸುವ ಯಾವುದೇ ಯತ್ನವು, ದೇಶದ ಆರ್ಥಿಕತೆಯ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಲಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಹೇಳಿದ್ದಾರೆ.
ಬಾಹುಬಲಿಯ ಉಲ್ಲೇಖ: ಈ ಕುರಿತು ಮಾತನಾಡುತ್ತಾ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಸಿನಿಮಾವನ್ನೂ ಪ್ರಸ್ತಾಪಿಸಿದ ಅವರು, ‘ನೋಟು ಅಮಾನ್ಯ ನಿರ್ಧಾರದ ಸುತ್ತಲಿನ ಮಾಹಿತಿಗಳಿಗೆ ‘ಉಕ್ಕಿನ ಕೋಟೆ’ ನಿರ್ಮಿಸುವಂಥ ಅಭ್ಯಾಸವನ್ನು ಮೊದಲು ಬಿಟ್ಟುಬಿಡಬೇಕು. ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರವನ್ನು ಉಕ್ಕಿನ ಕೋಟೆಯೊಳಗಿಟ್ಟು, ಅದನ್ನು ಬಾಹುಬಲಿಗೂ ಒಡೆಯಲಾಗದಂತೆ ಮಾಡುವುದು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ,’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ