ಆರ್ಥಿಕತೆ ಕುಸಿಯುತ್ತಿದೆ: ರಾಹುಲ್ ತರಾಟೆ
Team Udayavani, Aug 23, 2019, 6:10 PM IST
ಹೊಸದಿಲ್ಲಿ: ಭಾರತದ ಆರ್ಥಿಕತೆ ಕುಸಿಯುತ್ತಿದೆ. ಈ ಬಗ್ಗೆ ಸರಕಾರದ ಹಣಕಾಸು ಸಲಹೆಗಾರರೇ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನೇತಾರ, ವಯನಾಡ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನಾವು ಹಿಂದಿನಿಂದಲೂ ಹೇಳುತ್ತಿರುವುದನ್ನೀಗ ಸಲಹೆಗಾರರು ಹೇಳುತ್ತಿದ್ದು, ಆರ್ಥಿಕತೆ ಕುಸಿಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ಆದ್ದರಿಂದ ಇನ್ನಾದರೂ ಸರಕಾರ ನಾವು ಹೇಳುತ್ತಿರುವುದನ್ನು ಕೇಳಬೇಕು. ಆರ್ಥಿಕತೆ ಸರಿದಾರಿಗೆ ತರುವುದರೊಂದಿಗೆ ದುರಾಸೆ ಇರುವವರ ಕೈಗೆ ಹಣ ನೀಡದೇ ದೀನರ ಕೈಗೆ ಹಣ ನೀಡಬೇಕು ಎಂದು ಹೇಳಿದ್ದಾರೆ. ಈ ಕುರಿತು ಅವರು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಆರ್ಥಿಕತೆ ಕುಸಿತದ ಕುರಿತ ಹೇಳಿಕೆ ಉದ್ಧರಿಸಿ ಟ್ವೀಟ್ ಮಾಡಿದ್ದಾರೆ.