ಮಹಿಳೆಯ ವೈಕಲ್ಯ ಮೀರಿದ ಪರಿಶ್ರಮ
Team Udayavani, Jun 4, 2019, 6:00 AM IST
ತಿರುವನಂತಪುರ: ಸಾಧನೆಗೆ ಅಂಗವೈಕಲ್ಯ ಎಂದಿಗೂ ತೊಡಕಲ್ಲ ಎಂಬುದನ್ನು ಸಾಬೀತುಪಡಿಸಿರುವ ಅನೇಕ ಪ್ರತಿಭೆಗಳಿಗೆ ಇದೀಗ ಕೊಟ್ಟಾಯಂನ ಲತೀಶಾ ಅನ್ಸಾರಿ ಸೇರ್ಪಡೆಗೊಂಡಿದ್ದಾರೆ. ಅನ್ಸಾರಿ,
ಹುಟ್ಟಿನಿಂದಲೇ ಮೂಳೆಗಳ ಸಂಬಂಧಿತ ಕಾಯಿಲೆಯನ್ನು (ಟೈಪ್ 2 – ಒಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ) ಹೊಂದಿದ್ದು, ಜತೆಗೆ ಪಲ್ಮನರಿ ಹೈಪರ್ಟೆನ್ಶನ್ ಹೊಂದಿದ್ದಾರೆ. ಹಾಗಾಗಿ, ಅವರು ಎಲ್ಲರಂತೆ ಸಹಜವಾಗಿ ಬೆಳವಣಿಗೆಯಾಗಿಲ್ಲ.
ಓಡಾಡಲು ಗಾಲಿ ಕುರ್ಚಿಯನ್ನೇ ಅವಲಂಬಿಸಿರುವ ಅವರು ಸದಾ ತಮ್ಮೊಂದಿಗೆ ಆಮ್ಲಜನಕದ ಸಿಲಿಂಡರನ್ನು ಹೊಂದಿರುತ್ತಾರೆ. ಇಂಥ ದಯನೀಯ ಸ್ಥಿತಿಯಲ್ಲಿದ್ದರೂ ಐಎಎಸ್ ಮಾಡುವ ಗುರಿ ಹೊಂದಿರುವ ಲತೀಶಾ, ಈ ಬಾರಿಯ ಐಎಎಸ್ ಪೂರ್ವಭಾವಿ ಪರೀಕ್ಷೆಯನ್ನೂ ತೆಗೆದುಕೊಂಡಿದ್ದರು.
ಕೊಟ್ಟಾಯಂನಲ್ಲಿ ರವಿವಾರ ಪರೀಕ್ಷೆ ಬರೆಯಲು ಆಮ್ಲಜನಕದ ಸಿಲಿಂಡರ್ ಜತೆಗೇ ಆಗಮಿಸಿದ್ದ ಇವರ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ