ಭಾರತದಲ್ಲೇ ರೆಡಿ ಆಗುತ್ತೆ ಎಫ್-16 


Team Udayavani, Jan 21, 2018, 12:34 PM IST

f16.jpg

ಹೊಸದಿಲ್ಲಿ: ಅಮೆರಿಕದ ಪ್ರಮುಖ ಯುದ್ಧ ವಿಮಾನ ತಯಾರಿಕಾ ಕಂಪೆನಿ ಲಾಕ್‌ಹಿಡ್‌ ಮಾರ್ಟಿನ್‌ ಎಫ್-16 ಯುದ್ಧ ವಿಮಾನವನ್ನು ಭಾರತದಲ್ಲಿಯೇ ತಯಾರಿಸಲು ಮುಂದಾಗಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಮೇಕ್‌ ಇನ್‌ ಇಂಡಿಯಾ’ಕ್ಕೆ ಹೆಚ್ಚಿನ ಒತ್ತು ದೊರೆತಂತಾಗುತ್ತದೆ. ಇದರ ಜತೆಗೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುದ್ಧ ವಿಮಾನಗಳನ್ನು ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಾಕ್‌ಹಿಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ಜತೆಗೆ ಪಾಲುದಾರಿಕೆ ನಡೆಯುವ ಹೆಗ್ಗಳಿಕೆಯೂ ಸಿಕ್ಕಿದಂತಾಗುತ್ತದೆ. 

ಈ ಬಗ್ಗೆ ಹೊಸದಿಲ್ಲಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಹಾರ ಅಭಿವೃದ್ಧಿ ಮತ್ತು ವ್ಯೂಹಾತ್ಮಕ ವಿಭಾಗದ ಉಪಾಧ್ಯಕ್ಷ ವಿವೇಕ್‌ ಲಾಲ್‌ “ಭಾರತಕ್ಕೆ ಅಗತ್ಯವಾಗಿರುವ ಯುದ್ಧ ವಿಮಾನ ತಯಾರಿಕೆಯಲ್ಲಿ ಉಂಟಾಗುವ ಯಶಸ್ಸು ದೇಶದ ಉದ್ಯಮ ಕ್ಷೇತ್ರಕ್ಕೆ ವಿಶೇಷವಾಗಿ ಉತ್ಪಾದನಾ ಕ್ಷೇತ್ರಕ್ಕೆ ಬಲ ಬರಲಿದೆ ಮತ್ತು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದು ಹೇಳಿದ್ದಾರೆ.

ಭಾರತಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗುವ ಯುದ್ಧ ವಿಮಾನ ತಾಂತ್ರಿಕವಾಗಿ ಅತ್ಯುತ್ಕೃಷ್ಟವಾಗಿ ರಲಿದೆ. ಎಫ್-16ರ ಸರಣಿಯಲ್ಲಿರುವ ಮೂರು ಮಾದರಿಯ ಯುದ್ಧ ವಿಮಾನಗಳು ಒಂದೇ ಎಂಜಿನ್‌ನದ್ದಾಗಿರಲಿವೆ ಎಂದಿದ್ದಾರೆ. ದೇಶದಲ್ಲಿ ವಿಮಾನ ಜೋಡಣಾ ಘಟಕಕ್ಕಿಂತ ಉತ್ಪಾದನೆ ಮಾಡುವ ಕ್ಷೇತ್ರದತ್ತಲೇ ಹೆಚ್ಚಿನ ಗಮನ ನೀಡಲು ಬಯಸಿದ್ದೇವೆ ಎಂದು ಹೇಳಿದ್ದಾರೆ. 

ಸದ್ಯ ದೇಶದಲ್ಲಿ ಬಳಕೆಯಾಗುವ ವಿಮಾನದ ತಾಂತ್ರಿಕ ವ್ಯವಸ್ಥೆಗಳು ಕಂಪೆನಿಯ ಎಫ್-22 ಮತ್ತು ಎಫ್-35 ವಿಮಾನಗಳಿಂದ ಪಡೆದುಕೊಂಡದ್ದೇ ಆಗಿವೆ ಎಂದು ವಿವೇಕ್‌ ಲಾಲ್‌ ಹೇಳಿದ್ದಾರೆ. ಎಫ್-16, ಎಫ್-22 ಮತ್ತು ಎಫ್-35 ಯುದ್ಧ ವಿಮಾನಗಳು ಬದಲಾದ ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಕೆಯಾಗಿವೆ. ಅವುಗಳ ಉತ್ಪಾದನೆಯು ಭಾರತದ ಮಧ್ಯಮ, ಮೈಕ್ರೋ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಹೆಚ್ಚಿನ ನೆರವಾಗಲಿದೆ ಎಂದು ಲಾಲ್‌ ಹೇಳಿದ್ದಾರೆ. 

ಆಸ್ಯಾ ರಾಡರ್‌ ಅನ್ನು ಕಂಪೆನಿ ಸತತ ಎರಡು ದಶಕಗಳ ಕಾಲ ಸಂಶೋಧನೆಯ ಫ‌ಲವಾಗಿ ಅಭಿವೃದ್ಧಿಪಡಿಸಿದೆ. ಸದ್ಯ ಅದು ಬಳಕೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಅತ್ಯಾಧುನಿಕ ಕಾಕ್‌ಪಿಟ್‌, ಹೆಚ್ಚು ಸಮಯದ ಕಾಲ ಬರುವ ಇಂಧನ ಟ್ಯಾಂಕ್‌, ಹೆಚ್ಚು ಬಾಳಿಕೆ ಬರುವ ವಿಮಾನದ ಎಂಜಿನ್‌ ವಿಮಾನಗಳಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಯಾರಿದು ವಿವೇಕ್‌ ಲಾಲ್‌?
ಭಾರತೀಯ ಅಮೆರಿಕನ್‌ ಆಗಿರುವ ಅವರು ಜನರಲ್‌ ಅಟೋಮಿಕ್ಸ್‌ನಿಂದ ಅತ್ಯಾಧುನಿಕ ಡ್ರೋಣ್‌ ಖರೀದಿ ಬಗ್ಗೆ ಭಾರಿ ಪ್ರಯತ್ನ ನಡೆಸಿದ್ದರು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.