Movie ಬಿಡುಗಡೆಯಾದ 7 ದಿನಗಳ ನಂತರ ವಿಮರ್ಶೆ ಪ್ರಕಟಿಸಿ: ಕೇರಳ ಹೈಕೋರ್ಟ್
Team Udayavani, Oct 9, 2023, 10:33 PM IST
ಕೊಚ್ಚಿ: ಸಿನಿಮಾ ಬಿಡುಗಡೆಯಾದ ಏಳು ದಿನಗಳ ನಂತರವಷ್ಟೇ ಚಿತ್ರದ ಕುರಿತಾದ ವಿಮರ್ಶೆಯನ್ನು ಪ್ರಕಟಿಸಬೇಕು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ.
“ಅರೋಮಲಿಂತೆ ಅದ್ಯತೆ ಪ್ರಣಯಂ’ ಸಿನಿಮಾದ ನಿದೇರ್ಶಕ ಮುಬಿನ್ ರೌಫ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ, ಆರಂಭಿಕ ನಕಾರಾತ್ಮಕ ವಿಮರ್ಶೆಯಿಂದ ಜನರಿಗೆ ಸಿನಿಮಾ ತಲುಪುವುದನ್ನು ತಪ್ಪಿಸುವುದರಿಂದ ಪಾರು ಮಾಡಲು ಈ ಆದೇಶ ಹೊರಡಿಸಿದೆ. ಹಲವರ ಸಾಮೂಹಿಕ ಶ್ರಮದಿಂದ ನಿರ್ಮಿಸಿರುವ ಸಿನಿಮಾವನ್ನು ಬೌದ್ಧಿಕ ಆಸ್ತಿ ಎಂದು ಕರೆದಿರುವ ನ್ಯಾಯಪೀಠ, ಇದೇ ವೇಳೆ ಸಿನಿಮಾ ಕುರಿತು ನಕಾರಾತ್ಮಕತೆಯನ್ನು ಸೃಷ್ಟಿಸುವುದರ ವಿರುದ್ಧ ತನಿಖೆಗೆ ಆದೇಶಿಸಿದೆ.
“ಮೊದಲ ದಿನವೇ ಚಿತ್ರದ ಕುರಿತು ನಕಾರಾತ್ಮಕ ವಿಮರ್ಶೆಯನ್ನು ಪ್ರಕಟಿಸುವುದರಿಂದ, ಸಿನಿಮಾ ಕುರಿತು ಜನರಿಗೆ ನಿರುತ್ಸಾಹ ಮೂಡಿಸಬಹುದು. ಅಲ್ಲದೇ ಸಕಾರಾತ್ಮಕ ವಿಮರ್ಶೆಗಾಗಿ ಆನ್ಲೈನ್ ಬ್ಲಾಗರ್ಸ್ನಿಂದ ಹಣಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ಶೋಷಣೆಯ ವಾತಾವರಣವನ್ನು ಸೃಷ್ಟಿಸಿದೆ’ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖೀಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ