ಔಷಧ ಉತ್ಪಾದಿಸುವ ಘಟಕದಲ್ಲಿ ಬೆಂಕಿ: ಓರ್ವನಿಗೆ ಗಾಯ
Team Udayavani, Feb 9, 2018, 11:23 AM IST
ಮುಜಫರನಗರ : ಕುಂದನಪುರ ಪ್ರದೇಶದಲ್ಲಿನ ಔಷಧ ಉತ್ಪಾದನೆ ಫ್ಯಾಕ್ಟರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದ ಅಗ್ನಿ ಶಾಮಕ ಸೇವಾ ವಿಭಾಗದ ಅಧಿಕಾರಿ ಎನ್ ಕೆ ಸಿಂಗ್ ಮೋಹನ್ಲಾಲ್ ಅವರನ್ನು ಸುಟ್ಟ ಗಾಯಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಲೆ ಅಗ್ನಿ ಶಾಮಕ ದಳದವರು ಧಾವಿಸಿ ಬಂದು ಬೆಂಕಿಯನ್ನು ನಂದಿಸಿದರು. ಔಷಧ ತಯಾರಿಸುವಲ್ಲಿನ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಉಂಟಾಯಿತೆಂದು ತಿಳಿಯಲಾಗಿದೆ.