ಲೂಧಿಯಾನ: ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರ ಸಾವು
Team Udayavani, Feb 17, 2018, 4:16 PM IST
ಲೂಧಿಯಾನ : ಇಲ್ಲಿನ ಧಂಧಾರಿ ಪ್ರದೇಶದ ಈಶ್ವರ್ ಕಾಲನಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ದಾರಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ನಿನ್ನೆ ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿತು. ರಂಜಿತ್ ಸಿಂಗ್ (27) ಅವರ ಪುತ್ರಿ, ಎಂಟು ವರ್ಷದ ಸಪ್ನಾ ಳ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸಲಾಗುತ್ತಿತ್ತು. ಕೇಕ್ ಕಟ್ ಮಾಡಿದ ಬಳಿಕ ರಂಜಿತ್ ಸಿಂಗ್ ಸಹಿತ ನಾಲ್ವರು ಮಹಡಿಗೆ ಹೋಗಿ ಅಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳಲಾರಂಭಿಸಿದರು. ಆ ಸಂದರ್ಭದಲ್ಲಿ ಅವರಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿ ಮಾತಿನ ಜಗಳ ಉಂಟಾಯಿತು.
ಆಗ ರಂಜಿತ್ ಸಿಂಗ್ ಅವರು ಮನೆಯ ಆವರಣ ಗೋಡೆಗೆ ತಾಗಿಕೊಂಡು ಸಾಗುವ ಹೈಟೆನ್ಶನ್ ವಯರ್ ಸಂಪರ್ಕಕ್ಕೆ ಬಂದರು. ನೆರವಿಗಾಗಿ ಕೂಗಿ ಕೊಂಡರು. ಅಲ್ಲಿದ್ದ ಉಳಿದ ಮೂವರು ಕೂಡಲೇ ಅವರ ನೆರವಿಗೆ ಧಾವಿಸಿದರು. ಎಲ್ಲರೂ ವಿದ್ಯುದಾಘಾತಕ್ಕೆ ಗುರಿಯಾಗಿ ಅಸುನೀಗಿದರು.
ಮೃತರನ್ನು ರಂಜಿತ್ ಸಿಂಗ್, ಸರ್ವಜಿತ್ ಸಿಂಗ್ 28, ಅಮರ್ಜಿತ್ ಸಿಂಗ್ 25 (ಇಬ್ಬರೂ ಸಹೋದರರು) ಮತ್ತು ಬುಧ್ರಾಜ್ 23 ಎಂದು ಗುರುತಿಸಲಾಗಿದೆ.
ಮೃತರು ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದು ಎಲ್ಲರೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್