ಕನ್ನಡದಲ್ಲೇ ಡೊಮೈನ್‌ ನೇಮ್‌ ಪಡೆಯಿರಿ!


Team Udayavani, Aug 13, 2018, 10:05 AM IST

domain.png

ಕೋಲ್ಕತಾ: ಅಯ್ಯೋ ಇಂಗ್ಲಿಷ್‌ ಗೊತ್ತಿಲ್ಲ, ಇಂಟರ್ನೆಟ್‌ ಬಳಕೆ ಮಾಡಲಾಗುತ್ತಿಲ್ಲ ಎಂಬ ಆತಂಕವಿರುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಸದ್ಯದಲ್ಲೇ ಕನ್ನಡವೂ ಸೇರಿದಂತೆ ಭಾರತದ 9 ಭಾಷೆಗಳಲ್ಲಿ ಡೊಮೈನ್‌ ನೇಮ್‌ ನೀಡಲು ತಯಾರಿ ನಡೆಯುತ್ತಿದೆ!

ದಿ ಇಂಟರ್ನೆಟ್‌ ಕಾರ್ಪೋರೇಶನ್‌ ಫಾರ್‌ ಅಸೈನ್‌x ನೇಮ್ಸ್‌ ಆ್ಯಂಡ್‌ ನಂಬರ್ಸ್‌(ಐಸಿಎಎನ್‌ಎನ್‌) ಎಂಬ ಲಾಭರಹಿತ ಸಂಸ್ಥೆ ಸ್ಥಳೀಯ ಭಾಷೆಗಳಲ್ಲಿ ಡೊಮೈನ್‌ ಮಾಡಿ ಕೊಡುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಗುರುತಿಸಿರುವ 9 ಲಿಪಿಗಳನ್ನೂ ಸೇರಿದಂತೆ ದೇಶದ 22 ಭಾಷೆಗಳಲ್ಲಿ ಡೊಮೈನ್‌ ನೇಮ್‌ ನೀಡಲು ಇದು ಸಿದ್ಧತೆ ನಡೆಸುತ್ತಿದೆ. ಈ ಸಂಸ್ಥೆಯೇ ಜಗತ್ತಿನ ಉದ್ದಗಲಕ್ಕೂ ಇಂಟರ್ನೆಟ್‌ ಡೊಮೈನ್‌ ನೇಮ್‌ ವ್ಯವಸ್ಥೆ (ಡಿಎನ್‌ಎಸ್‌) ಯನ್ನೂ ನೋಡಿಕೊಳ್ಳುತ್ತಿದೆ. 

ಭಾರತದ ಯಾವ ಭಾಷೆಗಳಲ್ಲಿ ಡೊಮೈನ್‌?: ಕನ್ನಡ, ಬೆಂಗಾಲಿ, ದೇವನಾಗರಿ, ಗುಜರಾತ್‌, ಗುರ್ಮುಖೀ, ಮಲಯಾಳಂ, ಒಡಿಯಾ, ತಮಿಳು ಮತ್ತು ತೆಲುಗು. ಈ ಲಿಪಿಗಳು ದೇಶದ ಹೆಚ್ಚು ಕಡಿಮೆ ಎಲ್ಲ ಭಾಷೆಗಳನ್ನೂ ಒಳಗೊಂಡಿವೆ. ಉದಾಹರಣೆಗೆ ಕನ್ನಡದಲ್ಲೇ ಡೊಮೈನ್‌ ಆಗಿ “ಉದಯವಾಣಿ. ಭಾರತ್‌’ ಅನ್ನು ಬಳಕೆ ಮಾಡಿಕೊಳ್ಳಬಹುದು. ಅಂದರೆ, ಸದ್ಯ ಬಳಕೆಯಲ್ಲಿರುವ com, .in, .net, .info, .news ರೀತಿಯಲ್ಲೇ .ಭಾರತ್‌, .ಪತ್ರಿಕೆ,.ಸುದ್ದಿ ಉಪಯೋಗಿಸಿಕೊಳ್ಳಬಹುದು. 

ಯಾಕೆ ಈ ಯೋಜನೆ?: ಸದ್ಯ ಜಗತ್ತಿನಾದ್ಯಂತ ಶೇ.52 ರಷ್ಟು ಮಂದಿ ಮಾತ್ರ ಇಂಟರ್ನೆಟ್‌ ಬಳಕೆ ಮಾಡುತ್ತಿದ್ದಾರೆ. ಇನ್ನೂ ಶೇ.48 ರಷ್ಟು ಮಂದಿ ಹೊರಗಿದ್ದಾರೆ. ಇವರಿಗೆ ಇರುವ ತೊಂದರೆ ಇಂಗ್ಲಿಷ್‌. ಈ ಭಾಷೆ ಗೊತ್ತಿಲ್ಲದ ಕಾರಣಕ್ಕಾಗಿ ಇಂಟರ್ನೆಟ್‌ ಬಳಕೆ ಮಾಡಲು ಆಗುತ್ತಿಲ್ಲ. ಹೀಗಾಗಿ ಸ್ಥಳೀಯ ಭಾಷೆಯಲ್ಲೇ ಡೊಮೈನ್‌ ನೀಡಿದರೆ ಇವರನ್ನೂ ಇಂಟರ್ನೆಟ್‌ ವ್ಯವಸ್ಥೆಗೆ ತರಬಹುದು ಎಂಬ ಲೆಕ್ಕಾಚಾರವಿದೆ. 

ಹೇಗೆ ಕೆಲಸ ಮಾಡುತ್ತೆ?: ಸದ್ಯ ನೀವು ಕನ್ನಡದಲ್ಲೇ “ಬೆಂಗಳೂರು’ ಅಥವಾ “ಕರ್ನಾಟಕ’ ಎಂದು ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ಟೈಪಿಸಿದರೆ ಇದಕ್ಕೆ ಸಂಬಂಧಿಸಿದ ಕನ್ನಡದ ಅಂಶಗಳೇ ಬರುತ್ತವೆ. ಹಾಗೆಯೇ ಕನ್ನಡದ ಡೊಮೈನ್‌ ಬಳಕೆ ಮಾಡಿದರೆ, ಸರ್ಚ್‌ ರಿಸಲ್ಟ್ ಕೂಡ ಕನ್ನಡದಲ್ಲೇ ಬರುತ್ತದೆ. 

ತಂತ್ರಜ್ಞರ ತಂಡ
ಅರೆ ಬ್ರಾಹ್ಮಿ ಪೀಳಿಗೆಯ ಸಮಿತಿ (ನಿಯೋ-ಬ್ರಾಹ್ಮಿ ಜನರೇಶನ್‌ ಪ್ಯಾನಲ್‌) ಎಂದು ಕರೆಯಲಾಗುವ ತಂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಲ್ಲಿ ಕನ್ನಡದ ಯು.ಬಿ.ಪವನಜ ಅವರು ಸೇರಿ ದಂತೆ ಒಟ್ಟು 60 ನುರಿತ ತಾಂತ್ರಿಕ ತಂತ್ರಜ್ಞರಿದ್ದಾರೆ. ಇದರಲ್ಲಿ ಭಾರತ, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ ಮತ್ತು ಸಿಂಗಾಪುರದ ತಂತ್ರಜ್ಞರೂ ಇದ್ದಾರೆ. ಈಗಾಗಲೇ ಕನ್ನಡ, ದೇವನಾಗರಿ, ಗುಜರಾತಿ, ಗುರ್ಮುಖೀ, ಒಡಿಯಾ ಮತ್ತು ತೆಲುಗು ಭಾಷೆಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡಲಾಗಿದೆ. ಬೇಕಾದಲ್ಲಿ ನೀವೂ ಅಭಿಪ್ರಾಯ ತಿಳಿಸಬಹುದು: www.icann.org/idn  

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.