ಗೋವಾ: ಮೊದಲ ದಿನವೇ ಅಧಿವೇಶನಕ್ಕೆ ತಟ್ಟಿದ ಪ್ರತಿಪಕ್ಷಗಳ ಪ್ರತಿಭಟನೆ
Team Udayavani, Oct 18, 2021, 4:59 PM IST
ಪಣಜಿ: ಕೇವಲ ಎರಡು ದಿನಗಳ ಅಧಿವೇಶನದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತಿಲ್ಲ ಎಂದು ಆಕ್ಷೇಪಿಸಿ ಪ್ರತಿಪಕ್ಷಗಳು ಅಧಿವೇಶನದ ಮೊದಲ ದಿನ ಸೋಮವಾರ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಇದರಿಂದಾಗಿ ಸಭಾಪತಿ ರಾಜೇಶ್ ಪಾಟ್ನೇಕರ್ ಮಧ್ಯಾಹ್ನ ಕೆಲ ಕಾಲ ಅಧಿವೇಶನ ಕಲಾಪವನ್ನು ಮುಂದೂಡಿದರು.
ಪ್ರಸಕ್ತ ಅಧಿವೇಶನವು ಸರ್ಕಾರದ ಕೊನೇಯ ಅಧಿವೇಶನವಾಗಿದ್ದು, ಕೇವಲ ಎರಡು ದಿನಗಳ ಕಾಲ ಅಧಿವೇಶನ ಆಯೋಜಿಸಿರುವುದರಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸುವುದಿಲ್ಲ. ಇಷ್ಟೇ ಅಲ್ಲದೆಯೇ ಯಾವುದೇ ಚರ್ಚೆಗೆ ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಅಧಿವೇಶನ ಕಾಲಾವಧಿಯನ್ನು ಹೆಚ್ಚಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರು.