ಸಿಬಿಐ ತನಿಖೆಗೆ ಕೇಂಬ್ರಿಜ್ ಹಗರಣ
Team Udayavani, Jul 27, 2018, 6:00 AM IST
ನವದೆಹಲಿ: ಕೇಂಬ್ರಿಜ್ ಅನಾಲಿಟಿಕಾ ಹಗರಣದ ತನಿಖೆಯನ್ನು ಸಿಬಿಐ ನಡೆಸಲಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, “ರಾಜಕೀಯ ಸಲಹಾ ಸಂಸ್ಥೆಯಾಗಿದ್ದ ಕೇಂಬ್ರಿಜ್ ಅನಾಲಿಟಿಕಾ, ಭಾರತದ ಫೇಸ್ಬುಕ್ ಬಳಕೆದಾರರ ಖಾತೆಯಿಂದಲೂ ಮಾಹಿತಿ ಕದ್ದಿರುವ ಶಂಕೆಯಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಲಿದೆ’ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ವದಂತಿಗಳ ತಡೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಬಗ್ಗೆ ಈಗಾಗಲೇ ಸೂಚಿಸಲಾಗಿದೆ ಎಂದು ಪ್ರಸಾದ್ ರಾಜ್ಯಸಭೆಗೆ ತಿಳಿಸಿದ್ದಾರೆ.
81 ಲಕ್ಷ ಕೋಟಿ ರೂ. ನಷ್ಟ: ಕೇಂಬ್ರಿಜ್ ಅನಾಲಿಟಿಕಾ ಹಗರಣದಿಂದಾಗಿ ಅಪಖ್ಯಾತಿ ಗೀಡಾದ ನಂತರ ಫೇಸ್ಬುಕ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಹೂಡಿಕೆಗೆ ಹಿಂದೇಟು ಹಾಕಿದ ಕಾರಣ ಫೇಸ್ಬುಕ್ ಸಂಸ್ಥೆಗೆ 81 ಲಕ್ಷ ಕೋಟಿ ರೂ. ನಷ್ಟವಾಗಿದೆ.