ಲೋಕಸಭೇಲಿ GST ಮಹಾ ಚರ್ಚೆ; ಏಕರೂಪದ ತೆರಿಗೆ, ಏನೆಲ್ಲಾ ಲಾಭ?
Team Udayavani, Mar 29, 2017, 1:59 PM IST
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕುರಿತ ನಾಲ್ಕು ತಿದ್ದುಪಡಿ ಮಸೂದೆಗಳ ಕುರಿತು ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಚರ್ಚೆ ಆರಂಭಿಸಿದರು. ಜಿಎಸ್ ಟಿ ಚರ್ಚೆ ಗಾಗಿ ಸುಮಾರು 7ಗಂಟೆ ಮೀಸಲಿಡಲಾಗಿದೆ. ಜಿಎಸ್ ಟಿ ಜಾರಿಯಿಂದಾಗುವ ಲಾಭದ ಬಗ್ಗೆ ಜೇಟ್ಲಿ ವಿಸ್ತ್ರತವಾಗಿ ಮಾತನಾಡಿದರು. ಬಳಿಕ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಜಿಎಸ್ ಟಿ ಕುರಿತು ಚರ್ಚೆಗೆ ಚಾಲನೆ ನೀಡಿದರು.
ಜಿಎಸ್ ಟಿ ಕ್ರಾಂತಿಕಾರಿ ಮಸೂದೆಯಾಗಿದೆ. ಈ ವ್ಯವಸ್ಥೆ ಜಾರಿಯಿಂದಾಗಿ ಎಲ್ಲರಿಗೂ ಲಾಭವಾಗಲಿದೆ. ಜಿಎಸ್ ಟಿ ಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ಮತ್ತು ಶಿಫಾರಸ್ಸಿಗಾಗಿ 12 ಸಭೆಗಳನ್ನು ನಡೆಸಲಾಗಿತ್ತು ಎಂದು ಜೇಟ್ಲಿ ಹೇಳಿದರು.
ಜಿಎಸ್ ಟಿ ಯಿಂದಾಗಿ ರಾಜ್ಯ ಹಾಗೂ ದೇಶಾದ್ಯಂತ ಏಕರೂಪದ ತೆರಿಗೆ ಜಾರಿಯಾಗಲಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ತೆರಿಗೆಯ ವ್ಯತ್ಯಾಸಕ್ಕೆ ಅಂತ್ಯಹಾಡಲಿದೆ ಎಂದು ವಿವರಿಸಿದರು.
ಜುಲೈ1ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿ ಮಾಡಲು ಕೇಂದ್ರ ಸರ್ಕಾರ ಪ್ರಸ್ತಾಪವಿಟ್ಟಿದೆ. ಸೋಮವಾರ ಅರುಣ್ ಜೇಟ್ಲಿ ಅವರು ಜಿಎಸ್ ಟಿಗೆ ಸಂಬಂಧಪಟ್ಟಂತೆ ಸಿಜಿಎಸ್ ಟಿ, ಐಜಿಎಸ್ ಟಿ, ಯುಟಿ ಜಿಎಸ್ ಟಿ ಹಾಗೂ ಜಿಎಸ್ ಟಿ ಪರಿಹಾರ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಜಿಎಸ್ ಟಿ ಸಾಧಕ, ಬಾಧಕ ಕುರಿತು ಮಹಾಚರ್ಚೆ;
ಜಿಎಸ್ ಟಿ ಸಾಧಕ, ಬಾಧಕಗಳ ಕುರಿತು ಚರ್ಚೆ ನಡೆಸಲು ಇಂದು 7ಗಂಟೆಗಳನ್ನು ಮೀಸಲಿಡಲಾಗಿದೆ. ಜಿಎಸ್ ಟಿ ಜಾರಿಯಿಂದ ಇ ಕಾಮರ್ಸ್ ಕ್ಷೇತ್ರಕ್ಕೂ ಬಲ ತುಂಬಲಿದೆ. ಜಿಎಸ್ ಟಿ ಜಾರಿಯಿಂದಾಗಿ ಪ್ರತ್ಯಕ್ಷ, ಪರೋಕ್ಷವಾಗಿರುವ ಎಲ್ಲಾ ತೆರಿಗೆ ರದ್ದಾಗಲಿದೆ. ದೇಶದ ಆರ್ಥಿಕತೆಗೆ ಬಲ ತುಂಬಲಿದೆ. ಎಲ್ಲಾ ಸರಕು, ಸೇವೆಗಳಿಗೆ ಏಕ ರೂಪದ ತೆರಿಗೆ ಜಾರಿಯಾಗಲಿದೆ. ಮನೆ ಬಾಡಿಗೆಗೂ ಜಿಎಸ್ ಟಿ ಅನ್ವಯವಾಗಲಿದೆ, ಎಲೆಕ್ಟ್ರಾನಿಕ್ಸ್, ರಿಯಲ್ ಎಸ್ಟೇಟ್ ಕ್ಷೇತ್ರ ಅಭಿವೃದ್ಧಿಯಾಗುತ್ತೆ, ತಂಬಾಕು, ಆಲ್ಕೋಹಾಲ್ ಉತ್ಪನ್ನಗಳ ಮೇಲೆ ಜಿಎಸ್ ಟಿ ಜಾರಿಯಾಗಲಿದೆ.
ಉಪಯೋಗ
*ಸದ್ಯ ಜಾರಿಯಲ್ಲಿರುವ ಕೇಂದ್ರ, ರಾಜ್ಯದ ಎಲ್ಲ ಪರೋಕ್ಷ ತೆರಿಗೆ ರದ್ದಾಗಲಿದೆ. ಏಕರೂಪದ ತೆರಿಗೆ ಜಾರಿಯಾಗಲಿದೆ.
*ನೂತನ ಜಿಎಸ್ ಟಿ ಜಾರಿಯಿಂದ ದೇಶಾದ್ಯಂತ ಏಕರೂಪದಲ್ಲಿರಲಿದೆ.
*ವಹಿವಾಟಿನ ಪ್ರತಿಯೊಂದು ಹಂತದಲ್ಲಿ ವಿಧಿಸಿದ ತೆರಿಗೆಯನ್ನು ಮುಂದಿನ ಹಂತದಲ್ಲಿ ತೆರಿಗೆ ಪಾವತಿಸಲು ಬಳಸಿಕೊಳ್ಳಬಹುದು. ಹೀಗಾಗಿ ಮೌಲ್ಯವರ್ಧಿತ ಭಾಗಕ್ಕೆ ಮಾತ್ರ ತೆರಿಗೆ ಅನ್ವಯವಾಗಲಿದೆ. ಇದರಿಂದಾಗಿ ದುಪ್ಪಟ್ಟು ತೆರಿಗೆ ತಪ್ಪಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!