ಗುಜರಾತ್ ಸಚಿವಾಲಯ ಹೊಕ್ಕ ಚಿರತೆ!
Team Udayavani, Nov 6, 2018, 6:50 AM IST
ಗಾಂಧಿನಗರ: ಗುಜರಾತ್ನ ಗಾಂಧಿನಗರದಲ್ಲಿನ ಸಚಿವಾಲಯಕ್ಕೆ ಸೋಮವಾರ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ ಈ ಅತಿಥಿಯನ್ನು ಹೊರಗೆ ಕಳುಹಿಸುವವರೆಗೂ ಸಚಿವಾಲಯ ದೊಳಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡಿರಲಿಲ್ಲ!
ಮಧ್ಯರಾತ್ರಿ 2 ಗಂಟೆಗೆ ಚಿರತೆಯೊಂದು ಸಚಿವಾಲಯದ ಮುಂದಿನ ಗೇಟ್ನ ಕೆಳಗಿನಿಂದ ಒಳಗೆ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಅದು ತಿಳಿಯುತ್ತಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಸಚಿವಾಲಯದ ಸಮೀಪದಲ್ಲೇ ಅರಣ್ಯ ಇದ್ದುದರಿಂದ, ಅಲ್ಲಿಂದಲೇ ಇದು ಪ್ರವೇಶಿಸಿರಬೇಕು ಎಂದು ಊಹಿಸಲಾಗಿದೆ.
ಸುಮಾರು 200 ಸಿಬಂದಿ ಸತತ 12 ತಾಸು ಕಾರ್ಯಾಚರಣೆ ನಡೆಸಿ ಸೋಮವಾರ ಮಧ್ಯಾಹ್ನ ಚಿರತೆಯನ್ನು ಬೋನಿಗೆ ಹಾಕಿದ್ದಾರೆ. ಚಿರತೆಯನ್ನು ಹಿಡಿಯುವವರೆಗೂ ಸಚಿವಾಲಯದೊಳಕ್ಕೆ ತೆರಳಲು ಯಾರಿಗೂ ಅವಕಾಶ ಮಾಡಿಕೊಡಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು