ಗುಲ್ಶನ್ ಕುಮಾರ್ ಹತ್ಯೆ ಕೇಸ್:ನಿರ್ಮಾಪಕ ರಮೇಶ್ ಖುಲಾಸೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್
1997ರಲ್ಲಿ ಅಂಧೇರಿ ಉಪನಗರದ ದೇವಾಲಯದ ಹೊರಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
Team Udayavani, Jul 1, 2021, 1:39 PM IST
ನವದೆಹಲಿ: 1997ರಲ್ಲಿ ಮ್ಯೂಸಿಕ್ ಬ್ರ್ಯಾಂಡ್ ಸಿರೀಸ್ ಮಾಲೀಕ ಗುಲ್ಶನ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ
ನಿರ್ಮಾಪಕ, ಟಿಪ್ಸ್ ಇಂಡಸ್ಟ್ರೀಸ್ ಸಹ ಸ್ಥಾಪಕ ರಮೇಶ್ ತೌರಾನಿ ನಿರ್ದೋಷಿ ಎಂಬ ಆದೇಶವನ್ನು ಬಾಂಬೆ ಹೈಕೋರ್ಟ್ ಗುರುವಾರ (ಜುಲೈ 01) ಎತ್ತಿಹಿಡಿದಿದ್ದು, ಆರೋಪಿ ಅಬ್ದುಲ್ ರೌಫ್ ಮರ್ಚಂಟ್ ನನ್ನು ಅಪರಾಧಿ ಎಂದು ಖಚಿತಪಡಿಸಿ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ನೀಡಿದೆ.
ಇದನ್ನೂ ಓದಿ:ಚಿಕ್ಕೋಡಿ ಪೊಲೀಸರ ಕಾರ್ಯಾಚರಣೆ 3.60 ಕೋಟಿ ರೂ ಮೌಲ್ಯದ 12 ಲಾರಿ ವಶ
ನ್ಯಾಯಮೂರ್ತಿಗಳಾದ ಜಸ್ಟೀಸ್ ಎಸ್.ಎಸ್. ಜಾಧವ್ ಮತ್ತು ಜಸ್ಟೀಸ್ ಎನ್.ಆರ್.ಬೋರ್ಕರ್ ನೇತೃತ್ವದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅಬ್ದುಲ್ ರಶೀದ್ ಮರ್ಚೆಂಟ್ ಸಹೋದರ ರೌಫ್ ಖುಲಾಸೆಗೊಂಡಿರುವ ಆದೇಶ ರದ್ದುಪಡಿಸಿತು.
ಅಲ್ಲದೇ ಜೀವಾಧಿ ಶಿಕ್ಷೆಯನ್ನು ಕಾಯಂಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.
ಕ್ಯಾಸೆಟ್ ಕಿಂಗ್ ಎಂದೇ ಕರೆಯಲ್ಪಡುತ್ತಿದ್ದ ಗುಲ್ಶನ್ ಕುಮಾರ್ ಅವರನ್ನು 1997ರಲ್ಲಿ ಅಂಧೇರಿ ಉಪನಗರದ ದೇವಾಲಯದ ಹೊರಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.