ವಿಯೆಟ್ನಾಂಗೆ INS ಕೃಪಾಣ್ ಹಸ್ತಾಂತರ
Team Udayavani, Jul 23, 2023, 7:16 AM IST
ನವದೆಹಲಿ: ಭಾರತವು ಕ್ಷಿಪಣಿ ಸಜ್ಜಿತ ಐಎನ್ಎಸ್ ಕೃಪಾಣ್ ಯುದ್ಧ ನೌಕೆಯನ್ನು ವಿಯೆಟ್ನಾಂಗೆ ಶನಿವಾರ ಹಸ್ತಾಂತರಿಸಿತು. ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಬೆಳವಣಿಗೆಯ ಭಾಗವಾಗಿ ಭಾರತವು ವಿಯೆಟ್ನಾಂಗೆ ಉಡುಗೊರೆಯಾಗಿ ಈ ಯುದ್ಧ ನೌಕೆಯನ್ನು ನೀಡುತ್ತಿದೆ.
ವಿಯೆಟ್ನಾಂಗೆ ಅಧಿಕೃತ ಪ್ರವಾಸದಲ್ಲಿರುವ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅವರು ಕ್ಯಾಮೆರಾನ್ನಲ್ಲಿ ನಡೆದ ಸಮಾರಂಭದಲ್ಲಿ ಐಎನ್ಎಸ್ ಕೃಪಾಣ್ ಹಸ್ತಾಂತರಿಸಿದ್ದಾರೆ. ಮಿತ್ರರಾಷ್ಟ್ರಕ್ಕೆ ಈ ರೀತಿ ಭಾರತ ಉಡುಗೊರೆಯಾಗಿ ಯುದ್ಧನೌಕೆಯನ್ನು ನೀಡುತ್ತಿರುವುದು ಇದೇ ಮೊದಲು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ತಿಂಗಳು ಈ ಕುರಿತು ಘೋಷಣೆ ಮಾಡಿದ್ದರು. ಜೂ.28ರಂದು ಭಾರತದಿಂದ ಹೊರಟ ಐಎನ್ಎಸ್ ಕೃಪಾಣ್, ಜು.8ರಂದು ಕ್ಯಾಮೆರಾನ್ ತಲುಪಿತು. ಇದೇ ವೇಳೆ ವಿಯೆಟ್ನಾಂ ಪೀಪಲ್ಸ್ ನೇವಿ ಪ್ರಧಾನ ಕಚೇರಿ ಹೈ ಪಾಂಗ್ಗೆ ಭೇಟಿ ನೀಡಲಿರುವ ಅಡ್ಮಿರಲ್ ಹರಿಕುಮಾರ್ ಅವರು, ವಿಯೆಟ್ನಾಂ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ