ಒಂದು ಅಂಕಿ ತಪ್ಪು ಒತ್ತಿದ್ದರಿಂದ ಸಾವಿರಾರು ರೂ. ಕಳೆದುಕೊಂಡ!


Team Udayavani, Jun 23, 2018, 6:00 AM IST

b-29.jpg

ನವದೆಹಲಿ: ಕಲಬುರಗಿಯಲ್ಲಿ ಕ್ಯಾಶ್‌ ಡೆಪಾಸಿಟ್‌ ಮಶಿನ್‌ನಲ್ಲಿ ತನ್ನ ಖಾತೆಗೆ ನಗದು ಡೆಪಾಸಿಟ್‌ ಮಾಡುವಾಗ ಕೇವಲ ಒಂದು ಅಂಕಿ ತಪ್ಪಾಗಿ ಒತ್ತಿದ್ದರಿಂದ ಮಹೇಂದ್ರ ಕುಮಾರ್‌ ಯಮನಪ್ಪ 49,500 ರೂ. ಕಳೆದುಕೊಂಡಿದ್ದಾರೆ. ಕಳೆದ ವರ್ಷ ಜುಲೈ 18ರಂದು ಮಶಿನ್‌ನಲ್ಲಿ ಹಣ ಡೆಪಾಸಿಟ್‌ ಮಾಡಿದ್ದರು. ಕ್ಯಾಶ್‌ ಡೆಪಾಸಿಟ್‌ ಮಾಡಿದ ನಂತರ ತನ್ನ ಖಾತೆಯಲ್ಲಿ ಬ್ಯಾಲೆನ್ಸ್‌ ಚೆಕ್‌ ಮಾಡಿದಾಗ ಹಣ ಡೆಪಾಸಿಟ್‌ ಆಗಿದ್ದನ್ನು ತೋರಿಸಿರಲಿಲ್ಲ. ನಂತರ ಟೆಂಪಲ್‌ ರೋಡ್‌ನ‌ಲ್ಲಿರುವ ಶಾಖೆಗೆ ಹೋಗಿ ವಿಚಾರಿಸಿದರು. ಅಷ್ಟೇ ಅಲ್ಲ, ದೂರನ್ನೂ ಕೊಟ್ಟರು. ಆದರೆ ತಾನು ಒಂದು ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದು ಅವರಿಗೆ ಗಮನಕ್ಕೆ ಬಂದಿರಲೇ ಇಲ್ಲ.

ಒಂದು ತಿಂಗಳಾದರೂ ಬ್ಯಾಂಕ್‌ ಅಧಿಕಾರಿಗಳು ಕ್ರಮ ಕೈಗೊಳ್ಳದ್ದರಿಂದ ಆಗಸ್ಟ್‌ನಲ್ಲಿ ಮತ್ತೂಂದು ದೂರು ನೀಡಿದರು. ಅಷ್ಟೇ ಅಲ್ಲ, ತನ್ನ ಬ್ಯಾಂಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಪೊಲೀಸರಿಗೂ ದೂರು ನೀಡಿದರು. ಆದರೆ ಇದೇ ವೇಳೆ ತೆಲಂಗಾಣದ ಅಡಿಲಾಬಾದ್‌
ನಲ್ಲಿನ ವ್ಯಕ್ತಿ ಸರಿಯಾಗಿ ಹದಿನಾರು ದಿನಗಳ ನಂತರ ಎಟಿಎಂಎ ಹೋಗಿ ತನ್ನ ಖಾತೆ ಚೆಕ್‌ ಮಾಡಿದಾಗ 49,500 ರೂ. ಹೆಚ್ಚುವರಿ ಇರುವುದು ಕಂಡುಬಂತು. ಖಾನ್‌ ಶಬಾಬ್‌ ತಡ ಮಾಡದೇ ಅಷ್ಟೂ ಹಣವನ್ನು ತೆಗೆದುಕೊಂಡಿದ್ದರು.

ಶಬಾಬ್‌ ಹಣವನ್ನೆಲ್ಲ ತೆಗೆದುಕೊಂಡ ನಂತರ, ಬ್ಯಾಂಕ್‌ ಅಧಿಕಾರಿಗಳು ತಪಾಸಣೆ ನಡೆಸಿ ಯಮನಪ್ಪ ತನ್ನ ಖಾತೆಗೆ ಹಣ ಡೆಪಾಸಿಟ್‌ ಮಾಡುವುದರ ಬದಲಿಗೆ ಶಬಾಬ್‌ ಖಾತೆಗೆ ಹಣ ಡೆಪಾಸಿಟ್‌ ಮಾಡಿದ್ದರು ಎಂದು ವರದಿ ನೀಡಿದ್ದರು. ಯಮನಪ್ಪ ಎಟಿಎಂನಲ್ಲಿ ತನ್ನ ಖಾತೆ ಸಂಖ್ಯೆಯನ್ನು ಒತ್ತುವಾಗ 0 ಬದಲಿಗೆ 8 ಒತ್ತಿದ್ದರು. ಎಟಿಎಂ ಹಾಗೂ ಕ್ಯಾಶ್‌ ಡೆಪಾಸಿಟ್‌ ಮಶಿನ್‌ಗಳಲ್ಲಿ 8 ರ ಬಟನ್‌ ಕೆಳಗೆ 0
ಇರುತ್ತದೆ. ಕಲಬುರಗಿ ಎಸ್‌ಬಿಐ ಅಧಿಕಾರಿಗಳು ಅಡಿಲಾಬಾದ್‌ ಶಾಖೆಯನ್ನು ಸಂಪರ್ಕಿಸಿದರಾದರೂ ಫ‌ಲ ನೀಡಲಿಲ್ಲ. ಹೀಗಾಗಿ ಯಮನಪ್ಪ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಆದರೆ ಇದು ಗ್ರಾಹಕರದ್ದೇ ದೋಷವಾಗಿರುವುದರಿಂದ ನ್ಯಾಯಾಲಯವು ಯಮನಪ್ಪ ದೂರನ್ನು ವಜಾಗೊಳಿಸಿತು. ಹೀಗಾಗಿ ಒಂದು ಅಂಕಿ ತಪ್ಪು ಒತ್ತಿದ್ದರಿಂದಾಗಿ ಯಮನಪ್ಪ 49,500 ರೂ. ಕಳೆದುಕೊಂಡಂತಾಗಿದೆ.

ಟಾಪ್ ನ್ಯೂಸ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.