ಪವಿತ್ರ ನಗರಿ ಅಯೋಧ್ಯೆಯಲ್ಲಿ ಸಂಭಾವ್ಯ ಉಗ್ರ ದಾಳಿ : ಕಟ್ಟೆಚ್ಚರ, ಬಿಗಿ ಭದ್ರತೆ
Team Udayavani, Jun 15, 2019, 4:13 PM IST
ಅಯೋಧ್ಯೆ : ಪವಿತ್ರ ನಗರಿ ಅಯೋಧ್ಯೆಯಲ್ಲಿ ಸದ್ಯೋಭವಿಷ್ಯದಲ್ಲಿ ಉಗ್ರ ದಾಳಿ ನಡೆಯಲಿದೆ ಎಂಬ ಗುಪ್ತಚರ ದಳದ ಮಾಹಿತಿಯನ್ನು ಅನುಸರಿಸಿ ಕಟ್ಟೆಚ್ಚರ ವಹಿಸಲಾಗಿದೆ.
ನೆರೆಯ ನೇಪಾಲದಿಂದ ಉಗ್ರರು ಉತ್ತರ ಪ್ರದೇಶದ ಅಯೋಧ್ಯೆಗೆ ನುಸುಳಿ ಬಂದಿರುವ ಸಾಧ್ಯತೆ ಇದ್ದು ಅವರು ಇಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಸಂಭವವಿದೆ ಎಂದು ಗುಪ್ತಚರ ದಳ ಮುನ್ನೆಚ್ಚರಿಕೆಯ ಮಾಹಿತಿ ನೀಡಿದೆ.
ಅಯೋಧ್ಯೆಯಲ್ಲೀಗ ಭದ್ರೆಯನ್ನು ಹೆಚ್ಚಿಸಲಾಗಿದ್ದು ಅರೆಸೈನಿಕ ದಳದ ಸಿಬಂದಿಗಳನ್ನು ಹೆಚ್ಚಿನ ಸಂಖೆಯಲ್ಲಿ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.