ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಚಿಕನ್ಗಾಗಿ ಜಗಳ: ಒಬ್ಬನ ಸಾವು
Team Udayavani, Apr 2, 2018, 5:48 PM IST
ಹೈದರಾಬಾದ್ : ಮದುವೆ ನಿಶ್ಚಿತಾರ್ಥದ ತಡರಾತ್ರಿಯ ಪಾರ್ಟಿಯೊಂದರಲ್ಲಿ ಚಿಕನ್ ಕರಿಯನ್ನು ಬೇಗನೆ ಬಡಿಸದಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಒಂದು ಗುಂಪು ಇನ್ನೊಂದು ಗುಂಪಿನೊಂದಿಗೆ ನಡೆಸಿದ ಜಗಳದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಚಾರ್ಮಿನಾರ್ ಸಮೀಪದ ಹುಸೈನೀ ಆಲಂ ಪ್ರದೇಶದಲ್ಲಿನ ಮದುವೆ ಕಾರ್ಯಕ್ರಮದ ಹಾಲ್ನಲ್ಲಿ ನಡೆದಿದ್ದ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಚಿಕನ್ ಕರಿ ತಡವಾಗಿ ಬಳಸಿದ ಕಾರಣಕ್ಕೆ ಸಿಟ್ಟಿಗೆದ್ದ ಒಂದು ಗುಂಪು ಇನ್ನೊಂದು ಗುಂಪಿನೊಡನೆ ನಸುಕಿನ 1.30ರ ಹೊತ್ತಿಗೆ ಜಗಳ ನಡೆಸಿತು. ಘರ್ಷಣೆಯಲ್ಲಿ ಒಬ್ಬ ಹುಡುಗ ಮೃತಪಟ್ಟು ಇನ್ನೊಬ್ಬ ಹುಡುಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ಘಟನೆಗೆ ಸಂಬಂಧಿಸಿ ಮೂಸರನ್ನು ವಶಕ್ಕೆ ತೆಗೆದುಕೊಂಡ ಇನ್ನಷ್ಟು ಮಂದಿ ಆರೋಪಿಗಳ ಹುಡುಕಾಟದಲ್ಲಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!