ಪಕ್ಕದ ಬಿಲ್ಡಿಂಗ್ ಗೆ ವ್ಯಾಪಿಸಿದ ಬೆಂಕಿಯ ಹೊಗೆ: ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತ್ಯು
Team Udayavani, Apr 16, 2023, 10:22 AM IST
ಹೈದರಾಬಾದ್: ಮರದ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಭಾನುವಾರ (ಏ.16 ರಂದು) ಮುಂಜಾನೆ ಹೈದರಾಬಾದ್ ನ ಕುಶೈಗುಡದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ವಾರಂಗಲ್ ಮೂಲದವರರಾದ ಸುರೇಶ್, ಸುಮಾ ಮತ್ತು ಬಾಬು ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಟಿಂಬರ್ ಡಿಪೋದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೊಗೆ ಪಕ್ಕದಲ್ಲೇ ಇರುವ ಬಿಲ್ಡಿಂಗ್ ಗೂ ವ್ಯಾಪಿಸಿದೆ. ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿ ಕುಟುಂಬವೊಂದು ವಾಸಿಸುತ್ತಿದ್ದು ದಟ್ಟ ಹೊಗೆಯ ಕಾರಣ ಮೂವರಿಗೆ ಉಸಿರುಗಟ್ಟಲು ಶುರುವಾಗಿದೆ. ಈ ವೇಳೆ ಹೊಗೆಯ ನಡುವೆಯೇ ಮನೆಯಿಂದ ಹೊರಬರಲು ಯತ್ನಿಸಿದ ಮೂವರು ಒಂದನೇ ಮಹಡಿಗೆ ಬರುವ ವೇಳೆಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಕಿ ನಂದಿಸಿದ ಬಳಿಕ ಕುಟುಂಬ ಇರುವ ಬಗ್ಗೆ ತಿಳಿದ ಅಗ್ನಿಶಾಮಕ ಮತ್ತು ಡಿಆರ್ಎಫ್ ಸಿಬ್ಬಂದಿ ಕಟ್ಟಡದೊಳಗೆ ಧಾವಿಸಿದ್ದಾರೆ. ಈ ವೇಳೆ ಮೂವರು ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕುಶೈಗುಡ ಎಸಿಪಿ ವೈ ವೆಂಕಟ್ ರೆಡ್ಡಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?