I.N.D.I.A; ನಿತೀಶ್ರನ್ನು ನಂಬದಂತೆ ಸಲಹೆ ನೀಡಿದ್ದ ಡಿಎಂಕೆ
Team Udayavani, Jan 30, 2024, 5:29 AM IST
ಹೊಸದಿಲ್ಲಿ: ಇಂಡಿಯಾ ಒಕ್ಕೂಟದಿಂದ ಬಿಹಾರ ಸಿಎಂ ನಿತೀಶ್ ಕುಮಾರ್ ಹೊರ ನಡೆಯುವ ಬಗ್ಗೆ ಡಿಸೆಂಬರ್ನಲ್ಲೇ ಡಿಎಂಕೆ, ಆರ್ಜೆಡಿ, ಟಿಎಂಸಿ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ್ದವು. ಆ ಮೂರು ಪಕ್ಷಗಳ ನಾಯಕರು ಜೆಡಿಯು ನಾಯಕ ಮೇಲೆ ಸಂಪೂರ್ಣವಾಗಿ ವಿಶ್ವಾಸ ಇಟ್ಟಿರಲಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಡಿಸೆಂಬರ್ನಲ್ಲಿ ಮುಂಬಯಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯ ವೇಳೆಯೇ ನಿತೀಶ್ ಕುಮಾರ್ ಅವರ ನಡೆ ಮೇಲೆ ಅನುಮಾನ ಆರಂಭ ವಾಗಿತ್ತು. ಆ ಸಭೆಯಲ್ಲೇ ಹಿಂದಿ ಭಾಷೆಯ ವಿಚಾರಕ್ಕೆ ನಿತೀಶ್, ಡಿಎಂಕೆಯ ಟಿ.ಆರ್. ಬಾಲು ನಡುವೆ ವಾಗ್ಧಾವೂ ಉಂಟಾಗಿತ್ತು. ಆದರೆ ಹಿಂದಿ ಹಾರ್ಟ್ಲ್ಯಾಂಡ್ನಲ್ಲಿ ಮೋದಿಗೆ ಪ್ರಬಲ ಪೈಪೋಟಿ ನೀಡಬಲ್ಲ ವ್ಯಕ್ತಿ ವಿರುದ್ಧ ಯಾರು ಚಕಾರ ಎತ್ತಲಿಲ್ಲ. ಆದರೆ ಸಮಯ ಕಳೆದಂತೆ, ಜೆಡಿಯು ಒಕ್ಕೂಟ ತೊರೆಯುವ ಕುರುಹುಗಳ ಕುರಿತು ಕಾಂಗ್ರೆಸ್ಗೆ ಡಿಎಂಕೆ, ಟಿಎಂಸಿ ಮತ್ತು ಆರ್ಜೆಡಿ ಎಚ್ಚರಿಸಿದ್ದವು’ ಎಂದು ಮೈತ್ರಿಕೂಟದ ನಾಯಕರೊಬ್ಬರು ತಿಳಿಸಿದ್ದಾರೆ. “ಲಾಲು ಕುಟುಂಬದ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿಗಳು ಹೆಚ್ಚಾದವು. ನಿತೀಶ್ ಸಿಎಂ ಆಗಿರುವ ಸಂದರ್ಭದಲ್ಲಿ ಈ ರೀತಿ ಆಗಲು ಹೇಗೆ ಸಾಧ್ಯ? ನಿತೀಶ್ ಬೆಂಬಲವೂ ಇರಬಹು ದೆಂಬ ಮಾತೂ ಕೇಳಿಬಂದಿತ್ತು.
ಲೋಕ ಚುನಾವಣೆಯಲ್ಲಿ ಕಮಲ ಗೆಲುವು:ಕಿಶೋರ್
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅತ್ಯಧಿಕ ಸ್ಥಾನಗಳಿಂದ ಜಯಗಳಿಸಲಿದ್ದು, ಕ್ಲೀನ್ ಸ್ವೀಪ್ ಮಾಡಲಿದೆ. ಹೀಗೆಂದು ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ. ಈಗ ಇರುವ ಸ್ಥಾನ ಗಳನ್ನು ಎನ್ಡಿಎ ಮೈತ್ರಿಕೂಟ ಉಳಿಸಲಿದೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಸದ್ಯ ಬಿಜೆಪಿಗೆ 290, ಮೈತ್ರಿಪಕ್ಷಗಳು ಗೆದ್ದ ಸ್ಥಾನಗಳು ಸೇರಿ ಒಟ್ಟು 312 ಸಂಸದರ ಬೆಂಬಲವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್