ಭಾರತ ಮಾತೆಯೇ, ದೀಪಿಕಾಳ ತಲೆ ಉಳಿಸು: ಕಮಲ್ ಭಿನ್ನಹ
Team Udayavani, Nov 21, 2017, 5:07 PM IST
ಮುಂಬಯಿ : “ಭಾರತ ಮಾತೆಯೇ ನನ್ನ ಬಿನ್ನಹ ಆಲಿಸು, ದಯವಿಟ್ಟು ದೀಪಿಕಾಳ ತಲೆ ಉರುಳದಂತೆ ಅನುಗ್ರಹಿಸು’ ಎಂದು ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಭಾರತ ಮಾತೆಯಲ್ಲಿ ಮೊರೆ ಇಟ್ಟಿದ್ದಾರೆ.
ವಿವಾದಿತ “ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸಿರುವ ನಟಿ ದೀಪಿಕಾ ಪಡುಕೋಣೆಯ ತಲೆ ಕಡಿದವರಿಗೆ ಹತ್ತು ಕೋಟಿ ರೂ., ಜೀವಂತ ಸುಟ್ಟವರಿಗೆ ಐದು ಕೋಟಿ ರೂ. ಇನಾಮನ್ನು ಕೆಲವು ಕ್ಷುದ್ರ ಸಮೂಹಗಳು ಈಚೆಗೆ ಘೋಷಿಸುವ ಮೂಲಕ ದೀಪಾಕಾಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದವು.
“ಭಾರತ ಮಾತೆಯೇ, ದಯವಿಟ್ಟು ದೀಪಿಕಾಳ ತಲೆ ಉಳಿಸುವಂತೆ ಮಾಡು’ ಎಂದು ಪ್ರಾರ್ಥಿಸುವ ಮೂಲಕ ನಟ ಕಮಲ ಹಾಸನ್ ಬಾಲಿವುಡ್ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
“ದೀಪಿಕಾ ಳಿಗೆ ಆಕೆಯ ಸ್ವಾತಂತ್ರ್ಯವನ್ನು ನಿರಾಕರಿಸಬೇಡಿ; ಆಕೆಯ ದೇಹಕ್ಕಿಂತಲೂ ಹೆಚ್ಚಿನ ಗೌರವವನ್ನು ವ್ಯಕ್ತಿಯಾಗಿ, ನಟಿಯಾಗಿ ಆಕೆಗೆ ನೀಡಿ’ ಎಂದು ಕಮಲ ಹಾಸನ್ ಜನರನ್ನು ಆಗ್ರಹಿಸಿದ್ದಾರೆ.
ಹರಿಯಾಣ ಭಾರತೀಯ ಜನತಾ ಪಕ್ಷದ ಮುಖ್ಯ ಮಾಧ್ಯಮ ಸಂಚಾಲಕ ಈಚೆಗೆ “ಪದ್ಮಾವತಿ’ ದೀಪಿಕಾಳ ಶಿರಚ್ಛೇದನ ಮಾಡುವ ಯಾರಿಗೇ ಆದರೂ ತಾನು ಹತ್ತು ಕೋಟಿ ಇನಾಮು ನೀಡುವೆ ಎಂದು ಹೇಳಿರುವುದಕ್ಕೆ ಪ್ರತಿಯಾಗಿ, ಇದೀಕ ರಾಜಕೀಯ ರಂಗಕ್ಕೆ ಧುಮುಕುವ ಸಿದ್ಧತೆಯಲ್ಲಿರುವ ಕಮಲ ಹಾಸನ್, ಭಾರತ ಮಾತೆಯಲ್ಲಿ ದೀಪಿಕಾಳ ತಲೆ ಉಳಿಸೆಂದು ಪ್ರಾರ್ಥಿಸಿದ್ದಾರೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!