ಶ್ವಾನ ನಿರ್ವಹಣೆಗೆ ದಿಲ್ಲಿ ಐಐಟಿಯ ಜಾಹೀರಾತು; ಎಲ್ಲೆಡೆ ವ್ಯಾಪಕ ಟೀಕೆ
ಬಿ.ಟೆಕ್ ಪದವಿ, ಕಾರು ಇದ್ದರೆ ಶ್ವಾನ ನಿರ್ವಹಣೆಗಾರ ಹುದ್ದೆ!
Team Udayavani, Sep 7, 2020, 6:56 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ (ದಿಲ್ಲಿ ಐಐಟಿ) ಶ್ವಾನ ನಿರ್ವಹಣೆಗಾರ ಹುದ್ದೆ ನೇಮಕಾತಿಗೆ ನೀಡಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ.
ಈ ಜಾಹೀರಾತು ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವ್ಯಂಗ್ಯಕ್ಕೀಡಾಯಿತು.
ದೋಷಪೂರಿತ ಜಾಹೀರಾತು ಉನ್ನತ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಈ ಶ್ವಾನ ನಿರ್ವಹಣೆಗಾರ ಹುದ್ದೆಗೆ ನೇಮಕಾತಿಯನ್ನು ರದ್ದುಪಡಿಸಲಾಗಿದೆ.
ಏನಿತ್ತು ಜಾಹೀರಾತಿನಲ್ಲಿ?: ಐಐಟಿ ಕ್ಯಾಂಪಸ್ನಲ್ಲಿ ಶ್ವಾನ ನಿರ್ವಹಣೆಗಾರ ಹುದ್ದೆ ಭರ್ತಿಗಾಗಿ ಆ.25ರಂದು ಜಾಹೀರಾತು ನೀಡಿದ್ದು, ಬಿ.ಟೆಕ್ ಅಥವಾ ಬಿಎಸ್ಸಿ, ಬಿ.ಎ. ಬಿ.ಕಾಂ. ಪದವಿ ಹಾಗೂ ಸ್ವಂತ ಕಾರು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 45 ಸಾವಿರ ರೂ. ವೇತನ ನೀಡಲಾಗುವುದು ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ದಿಲ್ಲಿ ಪೊಲೀಸರಿಗೆ 20 ಸಾವಿರ ರೂ. ವೇತನ ನೀಡಲಾಗುತ್ತದೆ. ಆದರೆ ಶ್ವಾನ ನಿರ್ವಹಣೆಗಾರ ಹುದ್ದೆಗೆ ಇದಕ್ಕಿಂತ ದುಪ್ಪಟ್ಟು ವೇತನವನ್ನು ನೀಡುವುದಾಗಿ ಘೋಷಿಸಲಾಗಿತ್ತು.
ಸಾಮಾನ್ಯವಾಗಿ ಇಂತಹ ಹುದ್ದೆಗಳಿಗೆ 10, 12ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿಪಡಿಸಿರಲಾಗಿರುತ್ತದೆ. ಆದರೆ ದಿಲ್ಲಿ ಐಐಟಿ ಪ್ರಕಾರ, ಈ ಹುದ್ದೆಗೆ ಯಾವುದಾದರೂ ಪದವಿ ಹಾಗೂ ಕಾರು ಹೊಂದಿರಬೇಕು. 21-35 ವರ್ಷ ವಯಸ್ಸಿನ ಮಹಿಳೆಯರು ಹಾಗೂ ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು.
ಅಲ್ಲದೆ, ಕಾರು ಹೊಂದಿದ್ದರೆ ಶ್ವಾನವನ್ನು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ಯಲು ನೆರವಾಗುತ್ತದೆ. ನಾಯಿಗೆ ಲಸಿಕೆ ಹಾಕಿಸುವುದು, ಆರೈಕೆ ಮಾಡುವುದು, ವೈದ್ಯಕೀಯ ದಾಖಲೆ ಪತ್ರಗಳ ನಿರ್ವಹಣೆ, ಪಿಪಿಟಿ, ಎಕ್ಸೆಲ್ ಪ್ರದರ್ಶನ, ಕ್ರಿಮಿನಾಶಕ ಬಳಕೆ ಮತ್ತಿತರ ವಿಷಯಗಳಿಗಾಗಿ ಎನ್ಜಿಒ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ಕೆಲಸವನ್ನು ಮಾಡಬೇಕಿದೆ ಎಂದು ಐಐಟಿ ವಿವರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ