ನನಗೆ ಗೆಲ್ಲುವ ವಿಶ್ವಾಸವಿದೆ: ಪ್ರಧಾನಿ ಮೋದಿ ಪ್ರತಿಸ್ಪರ್ಧಿ ಬಹದೂರ್
Team Udayavani, Apr 30, 2019, 9:56 AM IST
ವಾರಾಣಸಿ: ನನಗೆ ಜಯ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಣಕ್ಕಿಳಿದಿರುವ ಮಾಜಿ ಬಿಎಸ್ ಎಫ್ ಯೋಧ ತೇಜ್ ಬಹದೂರ್ ಹೇಳಿಕೆ ನೀಡಿದ್ದಾರೆ.
ಸಮಾಜವಾದಿ ಪಕ್ಷ, ಬಹುಜನ್ ಸಮಾಜ್ ಪಕ್ಷ ಹಾಗೂ ರಾಷ್ಟ್ರೀಯ ಲೋಕ ದಳದ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕೆಧುಮುಕಿರುವ ತೇಜ್ ಬಹದೂರ್ ಪ್ರಚಾರ ಆರಂಭಿಸಿದ್ದಾರೆ.
ನಮ್ಮ ವಿಚಾರಗಳು ಸೈನಿಕರು, ರೈತರು ಮತ್ತು ಯುವಜನತೆಯಉದ್ಯೋಗಕ್ಕೆ ಸಂಬಂಧಿಸಿದ್ದಾಗಿವೆ. ಜನತೆ ಯಾರು ನಿಜವಾದ ಚೌಕೀದಾರ್ ಎನ್ನುವುದನ್ನು ನಿರ್ಣಯಿಸುತ್ತಾರೆ ಎಂದು ಎಎನ್ಐಗೆ ಹೇಳಿಕೆ ನೀಡಿದ್ದಾರೆ.
2017ರಲ್ಲಿ ತೇಜ್ ಬಹದೂರ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಹೇಳಿಕೆ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದರು. ವಿಡಿಯೋ ವೈರಲ್ ಆದ ಬಳಿಕೆಸೇನೆ ಆಂತರಿಕ ತನಿಖೆ ನಡೆಸಿ ಯಾದವ್ ರನ್ನು ಕರ್ತವ್ಯದಿಂದ ವಜಾಗೊಳಿಸಿತ್ತು.