ವಿವಿಧೆಡೆ ಸ್ವಾತಂತ್ರ್ಯ ಸಂಭ್ರಮ
Team Udayavani, Aug 16, 2017, 6:50 AM IST
ಉಡುಪಿ: ಬೀಡಿನಗುಡ್ಡೆ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಿಂದ ಜರಗಿತು. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಮುದರಂಗಡಿಯ ಸ್ವೀವನ್ ವಿಕ್ಟರ್ ಡಿ’ಸೋಜ, ಶಂಕರನಾರಾಯಣದ ಶ್ರೀವತ್ಸ ರಾವ್ ಬಿ.ವಿ., ದ್ವಿತೀಯ ಪಿಯುಸಿ ಗಂಗೊಳ್ಳಿಯ ರಾಧಿಕಾ ಪೈ, ಉಡುಪಿಯ ಕೆ.ಉತ್ಪಲ್ ಶೆಣೈ, ಅದಿತಿ ಕಿರಣ್ ಅವರನ್ನು ಸಮ್ಮಾನಿಸಲಾಯಿತು.
ರಾಜ್ಯ ಮಟ್ಟದ ಜೀವ ರಕ್ಷಕ ಪ್ರಶಸ್ತಿಯನ್ನು ಕುಂದಾಪುರದ ವಿ. ವಾಸುದೇವ ಹಂದೆ, ಕೋಟದ ನಾಗರಾಜ ಪುತ್ರನ್, ಉಡುಪಿಯ ನಿತ್ಯಾನಂದ ವಳಕಾಡು ಅವರಿಗೆ ನೀಡಲಾಯಿತು. ಉಡುಪಿ ಮುಕುಂದಕೃಪಾ, ಕುಂಜಿಬೆಟ್ಟು ಟಿ.ಎ.ಪೈ ಶಾಲೆ, ಇಂದ್ರಾಳಿ, ಬೈಲೂರು ವಾಸುದೇವ ಕೃಪಾ, ವಳಕಾಡು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕುದಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿರೀಕ್ಷಕ ರಾಘವೇಂದ್ರ ಆರ್. ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ವಿಜೇತರಾದವರ ವಿವರ ಇಂತಿದೆ:
ಪ್ರಾಥಮಿಕ ಶಾಲಾ ವಿಭಾಗ:
1. ವಳಕಾಡು ಶಾಲೆಯ ಸೇವಾದಳದ ಬಾಲಕಿಯರು, 2. ಸೈಂಟ್ ಸಿಸಿಲಿ ಶಾಲೆಯ ಗೈಡ್ಸ್ ಬಾಲಕಿಯರು,
ಪ್ರೌಢಶಾಲಾ ವಿಭಾಗ: 1. ಹೆಬ್ರಿ ನವೋದಯ ವಿದ್ಯಾಲಯದ ಸ್ಕೌಟ್ಸ್ ಬಾಲಕರು, 2. ಸೈಂಟ್ ಸಿಸಿಲಿ ಶಾಲೆ, 3. ಕಡಿಯಾಳಿ ಕಮಲಾಬಾಯಿ ಶಾಲೆ. ಕಾಲೇಜು ವಿಭಾಗ: 1. ಎಂಜಿಎಂ
ಆರ್ಮಿ ವಿಭಾಗ, 2. ಪಿಪಿಸಿ ನೇವಿ, 3. ಪಿಪಿಸಿ ಆರ್ಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ