ಚೀನ ಬೇಹುಗಾರಿಕೆ: ಕ್ಷಿಪಣಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ
Team Udayavani, Nov 6, 2022, 7:25 AM IST
ಹೊಸದಿಲ್ಲಿ: ಚೀನದ ಬೇಹುಗಾರಿಕ ನೌಕೆಯೊಂದು ಹಿಂದೂ ಮಹಾಸಾಗರವನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಭಾರತವು ಬಂಗಾಲ ಕೊಲ್ಲಿಯಲ್ಲಿ ನಡೆಸಲುದ್ದೇಶಿಸಿರುವ ಕ್ಷಿಪಣಿ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಯಿದೆ.
ಮುಂದಿನ ವಾರ ಮಹತ್ವದ ಅಗ್ನಿ ಸರಣಿಯ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಲು ಭಾರತ ಸಜ್ಜಾಗಿತ್ತು. ಆದರೆ ಚೀನದ ಗೂಢಚಾರಿ ಹಡಗು ಈ ಕ್ಷಿಪಣಿಯ ಮೇಲೆ ಕಣ್ಣಿಟ್ಟಿರುವುದರಿಂದ ಕ್ಷಿಪಣಿ ಪರೀಕ್ಷೆಯನ್ನೇ ಮುಂದೂಡಿಕೆ ಮಾಡುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀನದ 22 ಸಾವಿರ ಟನ್ ತೂಕದ ಯುವಾನ್ ವಾಂಗ್-6 ಬೇಹುಗಾರಿಕ ನೌಕೆಗೆ ಖಂಡಾಂತರ ಕ್ಷಿಪಣಿಗಳ ವೇಗ, ನಿಖರತೆ ಮತ್ತು ವ್ಯಾಪ್ತಿಯನ್ನು ಟ್ರ್ಯಾಕ್ ಮಾಡುವಂಥ ಸಾಮರ್ಥ್ಯವಿದೆ.
ಭಾರತದ ಉಪಗ್ರಹಗಳು ಮತ್ತು ಕ್ಷಿಪಣಿಗಳ ತಾಂತ್ರಿಕ ಗುಪ್ತಚರ ನಡೆಸಲೆಂದೇ ಚೀನವು ಈ ನೌಕೆಯನ್ನು ಕಳುಹಿಸಿರುವ ಸಾಧ್ಯತೆ ಯಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ