ಚೀನದ OBOR ಯೋಜನೆ: ವಿರೋಧದ ನಿಲುವು ಸಡಿಲಿಸಿದ ಭಾರತ
Team Udayavani, Dec 15, 2017, 11:02 AM IST
ಹೊಸದಿಲ್ಲಿ : ಚೀನದ ಮಹತ್ವಾಕಾಂಕ್ಷೆಯ ಒನ್ ಬೆಲ್ಡ್ ಒನ್ ರೋಡ್ (OBOR) ಯೋಜನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ ಭಾರತ, ಈಗ ತನ್ನ ನಿಲುವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿ, “ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸಂಬಂಧಿಸಿದ ನಮ್ಮ ಕಳವಳಗಳನ್ನು ಸೂಕ್ತವಾಗಿ ಪರಿಹರಿಸಿದರೆ ನಾವು ಯಾವುದೇ ಸಲಹೆಗಳಿಗೆ ಮುಕ್ತವಾಗಿರುತ್ತೇವೆ” ಎಂದು ಹೇಳಿದೆ.
ಚೀನದ ಓಬಿಓಆರ್ ಯೋಜನೆಗೆ ಸೇರಬೇಕೆಂದು ರಶ್ಯ ಆಗ್ರಹಿಸಿರುವುದನ್ನು ಅನುಸರಿಸಿ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಈ ಹೇಳಿಕೆಯನ್ನು ನೀಡಿದೆ.
ರಶ್ಯದ ವಿದೇಶ ಸಚಿವ ಸರ್ಗೆಯಿ ಲಾವ್ರೋವ್ ಅವರು ಕಳೆದ ಸೋಮವಾರ ಚೀನದ ಮಹತ್ವಾಕಾಂಕ್ಷೆಯ ಒನ್ ಬೆಲ್ಡ್ ಒನ್ ರೋಡ್ ಯೋಜನೆಗೆ ಭಾರತದ ಸೇರಬೇಕೆಂದು ಕೋರಿದ್ದರು. ಈ ದಿಶೆಯಲ್ಲಿ ಭಾರತ ಯಾವುದಾದರೊಂದು ಮಾರ್ಗವನ್ನು ಕಂಡುಕೊಂಡು ಈ ಬೃಹತ್ ಯೋಜನೆಯ ಲಾಭವನ್ನು ಪಡೆಯಬೇಕು; ಆದರೆ ಅದು ಈ ಯೋಜನೆ ಕುರಿತ ತನ್ನ ನಿಲುವನ್ನು ತ್ಯಜಿಸಬೇಕಾಗಿಲ್ಲ ಎಂದು ಹೇಳಿದ್ದರು.
ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಯೋಜನೆಯ ಬಗ್ಗೆ ಭಾರತಕ್ಕಿರುವ ಆಕ್ಷೇಪವೇ ಓಬಿಓರ್ ಯೋಜನೆಗೆ ತೊಡಕಾಗಿ ಪರಿಣಮಿಸಿದೆ. ಆದರೆ ಸದ್ಯಕ್ಕೆ ಚೀನ ಮತ್ತು ಪಾಕಿಸ್ಥಾನ ಈ ಯೋಜನೆಯ ಅನುಷ್ಠಾನವನ್ನು ವಿಭಿನ್ನ ಕಾರಣಗಳಿಗೆ ನಿಲ್ಲಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ