ಮಕ್ಕಳ ಕಳ್ಳಸಾಗಾಟ ಚರ್ಚಿಸದ ರಾಜ್ಯಸಭೆ: ಕೈಲಾಶ್ ಸತ್ಯಾರ್ಥಿ ಖಂಡನೆ
Team Udayavani, Jan 11, 2019, 11:38 AM IST
ಹೊಸದಿಲ್ಲಿ : ‘ಪಶುಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಮಕ್ಕಳ ಮಾರಾಟ, ಖರೀದಿ ಅವ್ಯಾಹತವಾಗಿ, ರಾಜಾರೋಷದಿಂದ ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಮಕ್ಕಳ ಬಗ್ಗೆ ಕಿಂಚಿತ್ ಕಾಳಜಿಯೂ ಇಲ್ಲ; ಅಂತೆಯೇ ಈ ಬಾರಿಯೂ ಮಕ್ಕಳ ಕಳ್ಳಸಾಗಾಟದ ಬಗ್ಗೆ ರಾಜ್ಯಸಭೆ ಯಾವುದೇ ಚರ್ಚೆ ನಡೆಸದಿರುವ ಮೂಲಕ ದೇಶದ ಲಕ್ಷಾಂತರ ಮಕ್ಕಳನ್ನು ವಂಚಿಸಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.
‘ಈ ದೇಶದಲ್ಲಿ ಮಕ್ಕಳು ಇಂದಿಗೂ ರಾಜಕೀಯ ಆದ್ಯತೆ ಎನಿಸಿಲ್ಲ; ಅದೀಗ ಮತ್ತೆ ಸಾಬೀತಾಗಿರುವುದು ಅಪಾರ ನೋವಿನ ವಿಷಯ. ಆದುದರಿಂದ ಸದನದ ಕನಿಷ್ಠ ಒಂದು ದಿನವನ್ನು ಸಂಪೂರ್ಣವಾಗಿ ಮಕ್ಕಳ ಸಮಸ್ಯೆ, ಸುರಕ್ಷೆ, ಶಿಕ್ಷಣ ಮತ್ತು ಕಲ್ಯಾಣದ ಬಗ್ಗೆ ಚರ್ಚಿಸಲು ನಿಗದಿಸಬೇಕಾಗಿದೆ ಮತ್ತು ಎಲ್ಲ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ’ ಎಂದು ಸತ್ಯಾರ್ಥಿ ಹೇಳಿದರು.
‘ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ’ ಎಂಬ ಕುರಿತಾಗಿ 25ನೇ ಲಾಲ್ ಬಹಾದ್ದೂರ್ ಶಾಸ್ತ್ರೀ ಸಂಸ್ಮರಣ ಉಪನ್ಯಾಸದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ ಸತ್ಯಾರ್ಥಿ ಅವರು, ‘ರಾಜ್ಯಸಭೆ ಈ ಬಾರಿಯೂ ಮಕ್ಕಳ ಕಳ್ಳಸಾಗಾಟ ನಿಗ್ರಹ ಮಸೂದೆಯನ್ನು ಚರ್ಚಿಸದಿರುವುದು ದುರದೃಷ್ಟಕರ’ ಎಂದು ಹೇಳಿದರು.
ಮಕ್ಕಳ ಕಳ್ಳಸಾಗಾಟ ತಡೆ ಮತ್ತು ಪುನರ್ ವಸತಿ 2018ರ ಮಸೂದೆಯನ್ನು ಲೋಕಸಭೆ ಕಳೆದ ವರ್ಷ ಜುಲೈನಲ್ಲಿ ನಡೆದಿದ್ದ ಮಳೆಗಾಲದ ಅಧಿವೇಶನದಲ್ಲಿ ಪಾಸು ಮಾಡಿತ್ತು. ಆದರೆ ಅದನ್ನು ಮೇಲ್ಮನೆಯಲ್ಲಿ ಪಾಸು ಮಾಡಬೇಕಿರುವ ರಾಜ್ಯಸಭೆಯು ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುವುದೆಂದು ಪಟ್ಟಿ ಮಾಡಲಾಗಿತ್ತು. ಆದರೆ ರಾಜ್ಯಸಭೆ ಆ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ