ಉಪಗ್ರಹಗಳ ಮೇಲೆ ಇಸ್ರೋ ನೇತ್ರ
ರಾಡಾರ್, ಟೆಲಿಸ್ಕೋಪ್ಗ್ಳುಳ್ಳ ವಿಚಕ್ಷಣ ವ್ಯವಸ್ಥೆಗೆ ಚಾಲನೆ
Team Udayavani, Sep 25, 2019, 5:20 AM IST
ಹೊಸದಿಲ್ಲಿ: ಭೂಮಿಯ ಕೆಳ ಹಂತದ ಕಕ್ಷೆಯಲ್ಲಿ ಸುತ್ತುತ್ತಿರುವ ಭಾರತದ ಉಪಗ್ರಹಗಳನ್ನು ಬಾಹ್ಯಾಕಾಶ ತ್ಯಾಜ್ಯಗಳಿಂದ ರಕ್ಷಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೋ), “ನೇತ್ರ’ ಎಂಬ ತಾರಾಲಯ ಮಾದರಿಯ ವ್ಯವಸ್ಥೆಗೆ ಚಾಲನೆ ನೀಡಿದೆ.
ಭೂಮಿಯ ಮೇಲ್ಮೆ ನಿಂದ 500ರಿಂದ 2 ಸಾವಿರ ಕಿ.ಮೀ. ಒಳಗಿನ ವಲಯದಲ್ಲಿ ಬರುವ ಕಕ್ಷೆಯನ್ನು ಕೆಳ ಹಂತದ ಭೂ ಕಕ್ಷೆ ಎಂದು ಕರೆಯುತ್ತಾರೆ. “ನೇತ್ರ’ ಎಂಬುದು ಟೆಲಿಸ್ಕೋಪ್ಗ್ಳು ಹಾಗೂ ರಾಡಾರ್ಗಳುಳ್ಳ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನಿಂದಲೇ ಭಾರತದ ಅತೀ ಕೆಳ ಕ್ರಮಾಂಕದ ಭೂಕಕ್ಷೆಯಲ್ಲಿನ ಉಪಗ್ರಹಗಳ ಮೇಲೆ ನಿಗಾ ಇಡುವಂತೆ ಇವುಗಳನ್ನು ರೂಪಿಸಲಾಗಿರುತ್ತದೆ. ಹಾಗಾಗಿ ಇದೊಂದು ರೀತಿಯಲ್ಲಿ ಟೆಲಿಸ್ಕೋಪ್ನಂತೆ ಕೆಲಸ ಮಾಡುತ್ತದೆ.
“ನೇತ್ರ’ ವ್ಯವಸ್ಥೆಯು ಬೆಂಗಳೂರಿನಲ್ಲಿರುವ ಇಸ್ರೋದ ಬಾಹ್ಯಾಕಾಶ ಪರಿಸ್ಥಿತಿ ಜಾಗೃತಿ ಹಾಗೂ ನಿರ್ವಹಣ ವ್ಯವಸ್ಥೆಯ ಭಾಗವಾಗಿರುವ, “ಡೇಟಾ ಪ್ರಾಸೆಸಿಂಗ್ ಯೂನಿಟ್’ ಹಾಗೂ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ ಎಂದು “ದಿ ಹಿಂದೂ’ ವರದಿ ಮಾಡಿದೆ.
ನಾಲ್ಕು ಕಡೆ ಅಳವಡಿಕೆ
ತಿರುವನಂತಪುರ ಬಳಿಯ ಪೊನ್ಮುಡಿ, ರಾಜಸ್ಥಾನದ ಮೌಂಟ್ ಅಬು, ದೇಶದ ಉತ್ತರ ಭಾಗ ಹಾಗೂ ಈಶಾನ್ಯ ಭಾಗದಲ್ಲಿ ಸ್ಥಾಪಿಸಲಾಗಿರುವ “ನೇತ್ರ’ ವ್ಯವಸ್ಥೆಯು 160ರಿಂದ 2,000 ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಸತತ ನಿಗಾ ವಹಿಸುವ ಸಾಮರ್ಥ್ಯ ಹೊಂದಿದೆ. ಇದು 10 ಸೆಂ.ಮೀ.ನಷ್ಟು ಚಿಕ್ಕದಾದ ವಸ್ತುವನ್ನೂ ಪತ್ತೆಹಚ್ಚುವುದು.
ನೇತ್ರ ಏಕೆ ಅವಶ್ಯಕ?
ಬಾಹ್ಯಾಕಾಶದಲ್ಲಿರುವ ಇತರ ಉಪಗ್ರಹಗಳ ಅವಧಿ ಮುಕ್ತಾಯ, ಅವುಗಳ ಧ್ವಂಸ ಹಾಗೂ ಮತ್ತಿತರ ಕಾರಣಗಳಿಂದಾಗಿ ಅಲ್ಲಿ ಸೃಷ್ಟಿಯಾಗುವ ಬಾಹ್ಯಾಕಾಶ ಅವಶೇಷಗಳು, ಭಾರತೀಯ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಬಲ್ಲವು. ಜತೆಗೆ ಹಾನಿಯನ್ನೂ ಮಾಡಬಲ್ಲವು. ಹಾಗಾಗಿ ಅವುಗಳಿಂದ ಉಪಗ್ರಹಗಳನ್ನು ರಕ್ಷಿಸುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!