ಜಮ್ಮು-ದಿಲ್ಲಿ ತುರಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ದರೋಡೆ
Team Udayavani, Jan 17, 2019, 6:28 AM IST
ಹೊಸದಿಲ್ಲಿ : ಜಮ್ಮು – ದಿಲ್ಲಿ ತುರಂತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಶಸ್ತ್ರ ದರೋಡೆಕೋರರು ಇಂದು ಗುರುವಾರ ಪ್ರಯಾಣಿಕರಿಗೆ ಚೂರಿ ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ನಗ-ನಗದು ಸೊತ್ತುಗಳನ್ನು ಲೂಟಿ ಮಾಡಿರುವುದಾಗಿ ವರದಿಯಾಗಿದೆ.
ದರೋಡೆಗೆ ಗುರಿಯಾದ ಪ್ರಯಾಣಿಕರೋರ್ವರು ರೈಲ್ವೆಯ ಕಂಪ್ಲೇಂಟ್ ಪೋರ್ಟಲ್ ಮೂಲಕ ದೂರು ದಾಖಲಿಸಿದಾಗಲೇ ರೈಲಿನಲ್ಲಿ ದರೋಡೆ ನಡೆದ ವಿಷಯ ಬೆಳಕಿಗೆ ಬಂತು.
12266 ನಂಬರ್ ನ ರೈಲು ದಿಲ್ಲ ಸರಾಯ್ ರೊಹಿಲ್ಲಾ ಸ್ಟೇಶನ್ ಸಮೀಪಿಸುತ್ತಿದ್ದಂತೆಯೇ ಬಿ3 ಮತ್ತು ಬಿ7 ಕೋಚ್ ಗಳ ಪ್ರಯಾಣಿಕರನ್ನು ಗುರಿ ಇರಿಸಿ ಸಶಸ್ತ್ರ ದರೋಡೆಕೋರರು ಲೂಟಿ ಮಾಡಿದರು ಎಂದು ದೂರುದಾರ ಅಶ್ವನಿ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆರ್ಪಿಎಫ್ ದಳಕ್ಕೆ ಈ ಬಗ್ಗೆ ಸ್ವಲ್ಪ ಮಾಹಿತಿ, ಸುಳಿವು ಸಿಕ್ಕಿದ್ದು ಅತ್ಯಂತ ಕ್ಷಿಪ್ರವಾಗಿ ದರೋಡೆಕೋರರನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರ ರೈಲ್ವೇ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ