ಜಮ್ಮು : ಗ್ರೆನೇಡ್ ಎಸೆದವ ಹಿಜ್ಬುಲ್ ಉಗ್ರ ಯಾಸಿರ್ ಭಟ್
Team Udayavani, Mar 7, 2019, 1:50 PM IST
ಜಮ್ಮು : ಜಮ್ಮು ನಗರದ ಜನದಟ್ಟನೆಯ ಬಸ್ ನಿಲ್ದಾಣದಲ್ಲಿಂದು ಬೆಳಗ್ಗೆ ಗ್ರೆನೇಡ್ ಎಸೆದು ಓರ್ವನನ್ನು ಬಲಿಪಡೆದು ಇತರ 30 ಮಂದಿ ಗಾಯಗೊಳ್ಳುವಂತೆ ಮಾಡಿದ ಉಗ್ರನನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರ, ಯಾಸೀರ್ ಭಟ್ ಅಲಿಯಾಸ್ ಅರ್ಹಾನ್ ಎಂದು ಗುರುತಿಸಲಾಗಿದೆ.
ಗ್ರೆನೇಡ್ ದಾಳಿ ನಡೆದ ಕೆಲವೇ ತಾಸುಗಳಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಈತನು ದಕ್ಷಿಣ ಕಾಶ್ಮೀರದ ಕುಲಗಾಂವ್ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ.
ಯಾಸಿರ್ ಭಟ್ಗೆ ಜನ ದಟ್ಟನೆಯ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಎಸೆಯುವಂತೆ ಹೇಳಿದವನು ಹಿಜ್ಬುಲ್ ಮುಜಾಹಿದೀನ್ನ ಕುಲಗಾಂವ್ ಜಿಲ್ಲಾ ಕಮಾಂಡರ್ ಫಾರೂಕ್ ಅಹ್ಮದ್ ಭಟ್ ಅಲಿಯಾಸ್ ಉಮರ್ ಎಂದು ಪೊಲೀಸರು ತಿಳಿಸಿದ್ದಾರೆ.