ಜಯಾಗೆ ಯಾವುದೇ ಗಾಯ ಆಗಿರಲಿಲ್ಲ; ಆಸ್ಪತ್ರೆ ವರದಿ
Team Udayavani, Mar 7, 2017, 3:45 AM IST
ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಯಾವುದೇ ಗಾಯ, ಹೊಡೆತಕ್ಕೆ ಒಳಗಾಗಿರಲಿಲ್ಲ. ಅಲ್ಲದೆ, ಅವರಿಗೆ ಸ್ವೀಕಾರ ಯೋಗ್ಯವಲ್ಲದ ಔಷಧಗಳನ್ನು ನೀಡಿರಲಿಲ್ಲ ಎಂದು ತಮಿಳುನಾಡು ಸರ್ಕಾರ ಇದೀಗ ಸ್ಪಷ್ಟಪಡಿಸಿದೆ.
ಚೆನ್ನೈನ ಅಪೋಲೋ ಆಸ್ಪತ್ರೆ ಹಾಗೂ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಹಸ್ತಾಂತರಿಸಿರುವ ಜಯಲಲಿತಾರ ಚಿಕಿತ್ಸಾ ವರದಿಯನ್ನು ಬಹಿರಂಗಪಡಿಸುತ್ತಾ, ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಈ ವಿಚಾರ ತಿಳಿಸಿದ್ದಾರೆ.
“ಜಯಾರನ್ನು ಯಾರೋ ನೂಕಿದ್ದರು. ಕೆಳಕ್ಕೆ ಬಿದ್ದ ಕಾರಣ ಅವರು ಗಾಯಗೊಂಡಿದ್ದರು. ಜತೆಗೆ, ಅವರಿಗೆ ದೀರ್ಘಧಿಕಾಲದಿಂದ ದೋಷಪೂರಿತ ಔಷಧಗಳನ್ನು ನೀಡಲಾಗುತ್ತಿತ್ತು’ ಎಂದು ಇತ್ತೀಚೆಗಷ್ಟೇ ಎಐಎಡಿಎಂಕೆ ಬಂಡಾಯ ನಾಯಕ ಪಿ.ಎಚ್. ಪಾಂಡಿಯನ್ ಆರೋಪಿಸಿದ್ದರು.
ಜಯಾಗೆ ನೀಡಲಾದ ಪ್ರತಿ ಚಿಕಿತ್ಸೆಯ ಬಗ್ಗೆಯೂ ಗೆಳತಿ ಶಶಿಕಲಾಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ. ಏಮ್ಸ್ನ ತಜ್ಞರು ಅಪೋಲೋಗೆ 5 ಬಾರಿ ಭೇಟಿ ನೀಡಿದ್ದನ್ನೂ, ಅವರ ವರದಿಯನ್ನೂ ಬಹಿರಂಗಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!