CM ನಿತೀಶ್ಗೆ ಇರಿಸುಮುರಿಸು ಆಗಬಾರದೆಂದು ರಾಜೀನಾಮೆ: ಜೆಡಿಯು ವಕ್ತಾರ ಆಲೋಕ್
Team Udayavani, Jun 14, 2019, 4:08 PM IST
ಪಟ್ನಾ : ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಗೆ ತನ್ನಿಂದ ಇರಿಸುಮುರಿಸು ಆಗಬಾರದೆಂಬ ಕಾರಣಕ್ಕೆ ತಾನು ಪಕ್ಷದ ವಕ್ತಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರಿ ನಾಲಗೆಯ ಜೆಡಿಯು ನಾಯಕ ಅಜಯ್ ಆಲೋಕ್ ಹೇಳಿದ್ದಾರೆ.
ಆಲೋಕ್ ಅವರು ನಿತೀಶ್ ಕುಮಾರ್ ಗೆ ತನ್ನಿಂದ ಯಾವಾಗ ಮತ್ತು ಹೇಗೆ ಮುಜುಗರ ಉಂಟಾಗಿದೆ ಎಂಬುದನ್ನು ವಿವರಿಸಿಲ್ಲ.
ಆದರೆ ವದಂತಿಗಳ ಪ್ರಕಾರ ಆಲೋಕ್ ಅವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರವನ್ನು ಹಾಗೂ ಅಲ್ಲಿನ ಕಾನೂನು ಬಾಹಿರ ಒಳ ವಲಸೆ ಸಮಸ್ಯೆಯನ್ನು ಕಟುವಾಗಿ ಟೀಕಿಸಿರುವುದು ನಿತೀಶ್ ಕುಮಾರ್ ಗೆ ಕಿರಿಕಿರಿ, ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ.
ಅಜಯ್ ಆಲೋಕ್ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ವಶಿಷ್ಠ ನಾರಾಯಣ ಸಿಂಗ್ ಅವರಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್