ದೇಗುಲ ಆಕಾರ ಕೇಕ್ ಕತ್ತರಿಸಿ ವಿವಾದ ಸೃಷ್ಟಿಸಿದ ಕಮಲ್ನಾಥ್
Team Udayavani, Nov 17, 2022, 5:46 PM IST
ಭೋಪಾಲ್: ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್ ಅವರು ಹನುಮಂತ ಸಹಿತವಾಗಿರುವ ದೇಗುಲ ಆಕೃತಿಯ ಕೇಕ್ ಕತ್ತರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಅವರ ರಾಜಕೀಯ ಕ್ಷೇತ್ರದ ಶಕ್ತಿಕೇಂದ್ರವಾಗಿರುವ ಚಿಂದ್ವಾರಾದಿಂದ ಆಗಮಿಸಿದ್ದ ಬೆಂಬಲಿಗರು ಹಿರಿಯ ನಾಯಕನನ್ನು ಸನ್ಮಾನಿಸುವ ಸಂದರ್ಭದಲ್ಲಿ ಈ ಎಡವಟ್ಟು ಉಂಟಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೆಳವಣಿಗೆಯನ್ನು ನಿಂದಿಸಿದ್ದು, ಕಾಂಗ್ರೆಸ್ಗೆ ದೇವರ ಮೇಲೆ ಗೌರವ ಇಲ್ಲ. ಹನುಮಂತನನ್ನು ಕೇಕ್ ಆಕೃತಿಯಲ್ಲಿ ರಚಿಸಿ ಕತ್ತರಿಸುವುದು ಹಿಂದೂ ಧರ್ಮಕ್ಕೆ ಮತ್ತು ಸನಾತನ ಧರ್ಮಕ್ಕೆ ಮಾಡಿದ ಅಗೌರವ ಎಂದು ದೂರಿದ್ದಾರೆ.
ಆದರೆ, ಕಾಂಗ್ರೆಸ್ನ ಮುಖಂಡ ಅಜಯ ಯಾದವ್ ಈ ಆರೋಪ ತಿರಸ್ಕರಿಸಿದ್ದು, ಕಮಲ್ನಾಥ್ ಧಾರ್ಮಿಕ ಮನೋಭಾವನೆ ಇರುವ ಮುಖಂಡ. ಬೆಂಬಲಿಗರು ತರುವ ವಿವಿಧ ಆಕೃತಿಯ ಕೇಕ್, ಹೂವಿನ ಹಾರಗಳನ್ನು ಪ್ರತ್ಯೇಕಿಸುವುದು ಕಷ್ಟ. ಪಕ್ಷದ ಕಾರ್ಯಕರ್ತ ತಂದಿರುವ ವಿಶೇಷ ರೀತಿಯ ಕಲಾಶೈಲಿಯ ಕೇಕ್ ಅನ್ನು ನಿರಾಕರಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.
#Watch: मध्य प्रदेश के पूर्व सीएम ने मंदिर के आकार का केक काटा, केक में हनुमान जी की फोटो भी लगी हुई थी। वीडियो वायरल होने पर BJP के प्रदेश प्रवक्ता बोले- किसी दूसरे धर्म के आराध्य का केक काटा होता तो सिर धड़ से अलग करने के नारे लग जाते।#MadhyaPradesh #Kamalnath #Viralvideo pic.twitter.com/GpQ9xlqABu
— Akash Savita (@AkashSa57363793) November 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ