Kejriwal ಮತ್ತೆ ವಿಚಾರಣೆಗೆ ಗೈರು: 7ನೇ ಸಮನ್ಸ್ ಜಾರಿಗೆ ಇ.ಡಿ. ಸಿದ್ಧತೆ
Team Udayavani, Feb 20, 2024, 12:11 AM IST
ಹೊಸದಿಲ್ಲಿ: ದಿಲ್ಲಿ ಅಬಕಾರಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಆರು ಬಾರಿ ಸಮನ್ಸ್ ಜಾರಿಗೊಳಿಸಿದೆ. ಆದರೆ 6ನೇ ಬಾರಿಯೂ ವಿಚಾರಣೆಗೆ ಅವರು ಗೈರಾಗಿದ್ದಾರೆ. ಹೀಗಾಗಿ 7ನೇ ಸಮನ್ಸ್ ಜಾರಿಗೆ ಇ.ಡಿ. ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆಪ್, “ಇಡಿ ಸಮನ್ಸ್ಗಳು ಕಾನೂನುಬಾಹಿರವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಪದೇ ಪದೆ ಸಮನ್ಸ್ ಜಾರಿಗೊಳಿಸುವ ಬದಲು ಕೋರ್ಟ್ ತೀರ್ಪಿಗೆ ಇ.ಡಿ. ಕಾಯಬೇಕು’ ಎಂದು ಹೇಳಿದೆ.
ಕೇಜ್ರಿವಾಲ್ ವಿರುದ್ಧ ಪ್ರಕರಣ: ಇದೇ ವೇಳೆ, ವಿಚಾರಣೆಗೆ ಗೈರಾಗುತ್ತಿರುವ ಕೇಜ್ರಿವಾಲ್ ವಿರುದ್ಧ ಇ.ಡಿ. ಅಧಿಕಾರಿಗಳು ಪ್ರಕರಣ ದಾಖಲಿಸಿ¨ªಾರೆ. ಕೇಜ್ರಿವಾಲ್ ತಮಗೆ ನೀಡಲಾದ ಮೊದಲ ಮೂರು ಸಮನ್ಸ್ಗಳಿಗೆ ಉದ್ದೇಶಪೂರ್ವಕವಾಗಿ ಅವಿಧೇಯರಾದ ಕಾರಣ ಐಪಿಸಿ ಸೆಕ್ಷನ್ 174ರ ಅಡಿ ದೂರು ದಾಖಲಿಸಲಾಗಿದೆ.