ನರೋಡಾ ಕೇಸು: ಕೊಡ್ನಾನಿ ಖುಲಾಸೆ
Team Udayavani, Apr 21, 2018, 7:00 AM IST
ಅಹಮದಾಬಾದ್: ನರೋಡಾ ಪಾಟಿಯಾ ಹತ್ಯಾಕಾಂಡದ ಪ್ರಮುಖ ರೂವಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕಿ, ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಗುಜರಾತ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಇದೇ ಪ್ರಕರಣದಲ್ಲಿ ಬಜರಂಗ ದಳದ ನಾಯಕ ಬಾಬು ಬಜರಂಗಿ ಅಲಿಯಾಸ್ ಬಾಬುಭಾಯ್ ಪಟೇಲ್ಗೆ ನೀಡಲಾಗಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಜತೆಗೆ ಕೊಡ್ನಾನಿ ಅವರ ಆಪ್ತ ಸಹಾಯಕ ಕೃಪಾಲ್ ಸಿಂಗ್ ಛಬಾರನ್ನು ದೋಷಮುಕ್ತಗೊಳಿಸಲಾಗಿದ್ದರೆ, ಮತ್ತೂಬ್ಬ ಸ್ಥಳೀಯ ನಾಯಕ ಸುರೇಶ್ ಲಂಗಾಡೋ ಅಲಿಯಾಸ್ ರಿಚರ್ಡ್ ಛರಾ ಮತ್ತು ಪ್ರಕಾಶ್ ರಾಥೋಡ್ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ 21 ವರ್ಷಕ್ಕೆ ಇಳಿಸಿದೆ. ನ್ಯಾ| ಹರ್ಷ ದೇವಾನಿ ಮತ್ತು ನ್ಯಾ| ಎ. ಎಸ್. ಸುಪೇಹಿಯಾ ಅವರನ್ನೊಳ ಗೊಂಡ ಗುಜರಾತ್ ಹೈಕೋರ್ಟ್ನ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ.
ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ 29 ಮಂದಿಯ ಪೈಕಿ 12 ಮಂದಿಗೆ ನೀಡಲಾಗಿದ್ದ ಶಿಕ್ಷೆಯನ್ನು ನ್ಯಾಯಪೀಠ ಎತ್ತಿಹಿಡಿದಿದೆ. ಮಾಜಿ ಸಚಿವೆ ಕೊಡ್ನಾನಿ ಸಹಿತ 17 ಮಂದಿಯನ್ನು ದೋಷಮುಕ್ತಿ ಗೊಳಿಸಲಾಗಿದೆ.
ಏನಿದು ಪ್ರಕರಣ?: 2007ರ ಫೆ.27 ರಂದು ಸಾಬರಮತಿ ಎಕ್ಸ್ಪ್ರೆಸ್ನಲ್ಲಿ 57 ಮಂದಿ ಕರಸೇವಕರ ಹತ್ಯೆಯಾದ ಬಳಿಕ 2007ರ ಫೆ.28ರಂದು ಅಹಮದಾ ಬಾದ್ ಸಮೀಪದ ನರೋಡಾ ಗಮ್ನಿಂದ 2 ಕಿ.ಮೀ. ದೂರದ ನರೋಡಾ ಪಾಟಿಯಾ ಎಂಬ ಸ್ಥಳದಲ್ಲಿ 97 ಮಂದಿ ಯನ್ನು ಕೊಲ್ಲಲಾಗಿತ್ತು. ಈ ಪ್ರಕರಣದ ಪ್ರಮುಖ ರೂವಾರಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಎಂದು ಆರೋಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ