ಶೇ.50 ಸಿಬಂದಿ ಹಾಜರಿಗೆ ಓಕೆ; ದಿಲ್ಲಿ ಸರಕಾರದ ಪ್ರಸ್ತಾವನೆಗೆ ಗವರ್ನರ್ ಒಪ್ಪಿಗೆ
Team Udayavani, Jan 22, 2022, 7:15 AM IST
ಪಟ್ನಾದ ಕಾರಾಗೃಹದಲ್ಲಿ ಕೈದಿಯೊಬ್ಬನ ಗಂಟಲು ದ್ರವದ ಮಾದರಿಯನ್ನು ಶುಕ್ರವಾರ ಭದ್ರತೆಯೊಂದಿಗೆ ಸಂಗ್ರಹಿಸಲಾಯಿತು.
ಹೊಸದಿಲ್ಲಿ: ದಿಲ್ಲಿಯಲ್ಲಿ ಖಾಸಗಿ ಕಂಪೆನಿಗಳಲ್ಲಿ ಶೇ. 50ರಷ್ಟು ಸಿಬಂದಿಗೆ ಮಾತ್ರ ಅವಕಾಶ ಕಲ್ಪಿಸುವ ಅಲ್ಲಿನ ಸರಕಾರದ ಪ್ರಸ್ತಾವನೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಒಪ್ಪಿಗೆ ನೀಡಿದ್ದಾರೆ. ಆದರೆ, ಸರಕಾರ ಸಲ್ಲಿಸಿದ್ದ, ನೈಟ್ ಕರ್ಫ್ಯೂವನ್ನು ತೆರವು ಹಾಗೂ ಸಮ- ಬೆಸ ಸಂಖ್ಯೆಯ ಆಧಾರದಲ್ಲಿ ತೆರೆಯುವ ನಿರ್ಧಾರವನ್ನೂ ಹಿಂಪಡೆಯುವ ಪ್ರಸ್ತಾವನೆಗಳಿಗೆ ಗವರ್ನರ್ ಒಪ್ಪಿಗೆ ಸೂಚಿಸಿಲ್ಲ. ಸುದ್ದಿಗೋಷ್ಠಿ ನಡೆಸಿದ್ದ ಡಿಸಿಎಂ ಮನೀಶ್ ಸಿಸೋಡಿಯಾ, ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಸಮ-ಬೆಸ ಅಂಗಡಿ ತೆರೆಯುವ ನಿಯಮ ಹಾಗೂ ನೈಟ್ ಕರ್ಫ್ಯೂ ನಿರ್ಬಂಧಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದರು.
ಹೊಸ ಕೇಸು: ದೇಶದಲ್ಲಿ ಗುರುವಾರ ದಿಂದ ಶುಕ್ರವಾರದ ಅವಧಿಯಲ್ಲಿ 3,47,254 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಮತ್ತು 703 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 20,18,825ರಷ್ಟಿದ್ದು, ಇದು ಕಳೆದ 235 ದಿನಗಳಲ್ಲೇ ಅತ್ಯಧಿಕ. ಈ ನಡುವೆ, ಶುಕ್ರವಾರದಂದು, ಮುಂಬಯಿಯಲ್ಲಿ 5,008 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಗುರುವಾರಕ್ಕೆ ಹೋಲಿ ಸಿದರೆ 700 ಕಡಿಮೆ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ
ಸೋಂಕಿತರ ಮಾಹಿತಿ ಸೋರಿಕೆ!: ಸರಕಾರದ ಸರ್ವರ್ಗಳಲ್ಲಿ ಅಡಕವಾಗಿದ್ದ ಕೊರೊನಾ ಸೋಂಕಿತ ಭಾರತೀಯರಲ್ಲಿ ಸುಮಾರು 20,000 ಮಂದಿಯ ಮಾಹಿತಿಗಳು ಸೋರಿಕೆಯಾಗಿವೆ. ಇವರೆಲ್ಲರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಲಿಂಗ, ಕೊರೊನಾ ಪತ್ತೆಗಾಗಿ ನಡೆಸಲಾಗಿರುವ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದ ದಿನಾಂಕ ಹಾಗೂ ಪರೀûಾ ವರದಿಗಳನ್ನು ಆನ್ಲೈನ್ ಚೋರರು ದೋಚಿದ್ದು, ಅವೆಲ್ಲವನ್ನು ರೈಡ್ ಫಾರಮ್ಸ್ ಎಂಬ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ