ಹಲವರ ಪ್ರಾಣ ಉಳಿಸಿದ ಚಾಲಕ
Team Udayavani, Mar 27, 2018, 7:30 AM IST
ಮಧ್ಯಪ್ರದೇಶ: ಪೆಟ್ರೋಲ್ ಟ್ಯಾಂಕರ್ ಚಾಲಕನ ಸಮಯ ಪ್ರಜ್ಞೆಯಿಂದ ಹತ್ತಾರು ಜನರ ಜೀವ ಉಳಿದ ಘಟನೆಯೊಂದು ನರಸಿಂಗ್ಪುರದಲ್ಲಿ ನಡೆದಿದೆ. ಇಂಧನವನ್ನು ಪೆಟ್ರೋಲ್ ಬಂಕ್ಗೆ ತುಂಬಿಸುತ್ತಿದ್ದಾಗ ಟ್ಯಾಂಕರ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತ ಚಾಲಕ ಸಾಜಿದ್, ಪ್ರಾಣ ಲೆಕ್ಕಿಸದೇ ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು ಬಂಕ್ನಿಂದ ದೂರಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ವಾಹನ ಸವಾರರೂ ತಮ್ಮ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಅಂಗಡಿಗಳಲ್ಲಿ ಅವಿತುಕೊಂಡಿದ್ದಾರೆ. ಬೆಂಕಿ ಹೊತ್ತಿದ್ದ ಟ್ಯಾಂಕರ್, ಬಂಕ್ನಲ್ಲೇ ಇದ್ದಿದ್ದರೆ ಅಲ್ಲಿ ಶೇಖರಣೆಯಾಗಿದ್ದ ಇಂಧನವೂ ಹೊತ್ತಿಕೊಂಡು ಅನಾಹುತವೇ ಸಂಭವಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!