ವಿಎಚ್ಪಿ ಮೆರವಣಿಗೆ: ಏರ್ ಗನ್, ತಲವಾರು ಪ್ರದರ್ಶನ; 250 ಮಂದಿ ವಿರುದ್ಧ ಕೇಸ್
Team Udayavani, Jun 3, 2019, 12:17 PM IST
ಪುಣೆ : ಪಿಂಪ್ರಿ ಚಿಂಚವಾಡದ ನಿಗಡಿಯಲ್ಲಿ ನಿನ್ನೆ ಭಾನುವಾರ ನಡೆದ VHP ಮೆರವಣಿಗೆಯಲ್ಲಿ ಏರ್ ಗನ್ ಮತ್ತು ತಲವಾರುಗಳನ್ನು ಝಳಪಿಸಿದ ವಿಶ್ವ ಹಿಂದೂ ಪರಿಷತ್ತಿನ ಸುಮಾರು 250 ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೇಸ್ ಬುಕ್ ಮಾಡಲ್ಪಟ್ಟವರಲ್ಲಿ ವಿಎಚ್ಪಿ ಸ್ಥಳೀಯ ಅಧ್ಯಕ್ಷ ಶರದ್ ಇನಾಮ್ದಾರ್, ಜಿಲ್ಲಾ ಅಧ್ಯಕ್ಷ ಧನಜಿ ಶಿಂಧೆ ಪ್ರಮುಖರಾಗಿದ್ದು ಇವರ ಸಹಿತ 250 ಮಂದಿ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಮತ್ತು ಬಾಂಬೆ ಪೊಲೀಸ್ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಂದು ಸೋಮವಾರ ತಿಳಿಸಿದ್ದಾರೆ.
ಅನುಮತಿ ನಿರಾಕರಿಸಲಾದ ಹೊರತಾಗಿಯೂ ವಿಎಚ್ಪಿ ಕಾರ್ಯಕರ್ತರು ನಿನ್ನೆ ಭಾನುವಾರ ಯಮುನಾನಗರದಲ್ಲಿ ಶೋಭಾ ಯಾತ್ರೆ ನಡೆಸಿದ್ದರು. ಇವರಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದರು. ಮೆರವಣಿಗೆಯಲ್ಲಿದ್ದ ನಾಲ್ವರು ಮಹಿಳೆಯರು ತಮ್ಮ ಕೈಯಲ್ಲಿದ್ದ ಏರ್ ರೈಫಲ್ಗಳು ಮತ್ತು ಇತರ ಐವರು ಮಹಿಳೆಯರು ತಮ್ಮ ಕೈಯಲ್ಲಿದ್ದ ತಲವಾರುಗಳನ್ನು ಝಳಪಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪಿಂಪ್ರಿ ಚಿಂಚವಾಡ ಕಮಿಷನರೇಟ್ ಪ್ರದೇಶದಲ್ಲಿ ಮೇ 21ರಿಂದ ಜೂನ್ 3ರ ವರೆಗೆ ನಿಷೇಧಾಜ್ಞೆ ಇದೆ. ಇದರ ಪ್ರಕಾರ ಯಾರೂ ಮೆರವಣಿಗೆ ನಡೆಸುವಂತಿಲ್ಲ; ಮೇಲಾಗಿ ಇತರರಿಗೆ ದೈಹಿಕ ಹಿಂಸೆ ನಡೆಸಬಹುದಾದ ಚೂರಿ, ಕತ್ತಿ, ತಲವಾರು ಗನ್, ಲಾಠಿ ಇತ್ಯಾದಿ ಯಾವುದೇ ಬಗೆಯ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ