ಮೋದಿ ಭೇಟಿ ವಿರೋಧಿಸಿ ಒಡಿಶಾದ ರೈಲು ನಿಲ್ದಾಣಕ್ಕೆ ನಕ್ಸಲರ ದಾಳಿ
Team Udayavani, Mar 31, 2017, 8:50 AM IST
ರಾಯಗಢ : ಜಿಲ್ಲೆಯ ದಹಿಸಲ್ಲು ಎಂಬಲ್ಲಿ ರೈಲು ನಿಲ್ದಾಣದ ಮೇಲೆ ನಕ್ಸಲರ ತಂಡ ಶುಕ್ರವಾರ ನಸುಕಿನ 2 ಗಂಟೆಯ ವೇಳೆ ದಾಳಿ ನಡೆಸಿದ್ದು ಕಂಟ್ರೋಲ್ ರೂಮ್ನಲ್ಲಿ ಸ್ಫೋಟಕಗಳನ್ನು ಸಿಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಒಡಿಶಾ ಭೇಟಿಯನ್ನು ವಿರೋಧಿಸಿ 2 ವಾರಗಳ ಮುಂಚೆ ನಕ್ಸಲರು ಈ ಕೃತ್ಯ ಎಸಗಿದ್ದಾರೆ. 20 ಕ್ಕೂ ಹೆಚ್ಚು ನಕ್ಸಲರು ದಾಳಿ ನಡೆಸಿರುವ ತಂಡದಲ್ಲಿದ್ದರು ಎಂದು ವರದಿಯಾಗಿದೆ.
ಎಪ್ರಿಲ್ 15 ರಂದು ಪ್ರಧಾನಿ ಮೋದಿ ಅವರು ಭೇಟಿ ನೀಡಬಾರದು, ಈ ಬಗ್ಗೆ ಜನ ಪ್ರತಿಭಟಿಸಬೇಕು ಎಂಬ ನಕ್ಸಲ್ ಬರಹಗಳ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.