Maratha Reserve; ನನ್ನನ್ನು ಕೊಲ್ಲಲು ಫಡ್ನವೀಸ್ ಸಂಚು: ಜಾರಂಗೆ ಆರೋಪ
Team Udayavani, Feb 26, 2024, 12:56 AM IST
ಮುಂಬಯಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮರಾಠಾ ಮೀಸಲು ಹೋರಾಟಗಾರ ಮನೋಜ್ ಜಾರಂಗೆ ಆರೋಪಿಸಿದ್ದಾರೆ.
ರವಿವಾರ ಜಲಾ°ದಲ್ಲಿ ಸುಮಾರು 1 ಗಂಟೆ ಕಾಲ ಮಾಡಿದ ಭಾಷಣದಲ್ಲಿ ಫಡ್ನವೀಸ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ ಜಾರಂಗೆ, “ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವಂತೆ ಕೆಲವರ ಮೇಲೆ ಒತ್ತಡ ಹಾಕಲಾಗುತ್ತಿಗೆ, ಆಮಿಷಗಳನ್ನು ಒಡ್ಡಲಾಗುತ್ತಿದೆ. ಈ ಎಲ್ಲ ಸಂಚಿನ ಹಿಂದೆ ಫಡ್ನವೀಸ್ ಇದ್ದಾರೆ. ಅವರು ನನ್ನನ್ನು ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ. ನಾನು ಬೇಕಿದ್ದರೆ ಈಗಲೇ ಫಡ್ನವೀಸ್ ಅವರ ನಿವಾಸಕ್ಕೆ ಹೋಗಲು ರೆಡಿ’ ಎಂದು ಹೇಳಿದರು.
ಈ ವೇಳೆ, ವೇದಿಕೆಯಲ್ಲಿ ಸ್ವಲ್ಪ ಕಾಲ ಗೊಂದಲ ಉಂಟಾಯಿತು. ಕೆಲವರು ಬಂದು, ಜಾರಂಗೆ ಅವರಿಂದ ಮೈಕ್ರೋಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದೂ ಕಂಡುಬಂತು. ಇದೇ ವೇಳೆ, ರಾಜ್ಯದಲ್ಲಿ ಮರಾಠರ ಪ್ರಭಾವವನ್ನು ಕೊನೆಗಾಣಿಸಲು ಫಡ್ನವೀಸ್ ಯತ್ನಿಸುತ್ತಿದ್ದಾರೆ ಎಂದೂ ಜಾರಂಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ