Mathura ಮಸೀದಿ ಸರ್ವೇ: ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್
Team Udayavani, Apr 16, 2024, 1:18 AM IST
ಹೊಸದಿಲ್ಲಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ನ್ಯಾಯಾಲಯ ಮೇಲುಸ್ತುವಾರಿ ಸರ್ವೇಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಆ.5ರ ವರೆಗೆ ವಿಸ್ತರಿಸಿದೆ. ಆ ಬಳಿಕ ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಒಟ್ಟಿಗೆ ಕೈಗೆತ್ತಿ ಕೊಳ್ಳುವುದಾಗಿ ನ್ಯಾ| ಸಂಜೀವ್ ಖನ್ನಾ ಮತ್ತು ನ್ಯಾ| ದೀಪಂಕರ್ ದತ್ತ ಅವರಿದ್ದ ಪೀಠ ತಿಳಿಸಿದೆ.
ಜ.16ರಂದು ಅಲಹಬಾದ್ ಹೈಕೋರ್ಟ್ನ ಆದೇ ಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ನ 13.37 ಎಕ್ರೆ ಪ್ರದೇಶದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಾಣವಾಗಿದ್ದು ಇದನ್ನು ಸ್ಥಳಾಂತರಿಸಬೇಕು ಎಂದು ಈ ಹಿಂದೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.