ಕೌನ್ಸಿಲರ್ಗಳಿಂದ ಆಣೆ ಮಾಡಿಸಿದ ಸಿಎಂ ಕೇಜ್ರಿವಾಲ್
Team Udayavani, Apr 28, 2017, 1:58 AM IST
ಹೊಸದಿಲ್ಲಿ: ಮಹಾನಗರಪಾಲಿಕೆಯಲ್ಲಿನ ಹೀನಾಯ ಸೋಲಿನಿಂದ ಕಂಗೆಟ್ಟಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಗುರುವಾರ ತಮ್ಮ 48 ಮಂದಿ ಕೌನ್ಸಿಲರ್ಗಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಪಕ್ಷಕ್ಕೆ ದ್ರೋಹ ಎಸಗುವುದಿಲ್ಲವೆಂದು ದೇವರ ಹೆಸರಲ್ಲಿ ಪ್ರಮಾಣವನ್ನೂ ಮಾಡಿಸುವ ಮೂಲಕ ಬೆರಗು ಮೂಡಿಸಿದ್ದಾರೆ.
ಕೇಜ್ರಿವಾಲ್ ಅವರು ಕೌನ್ಸಿಲರ್ಗಳೊಂದಿಗೆ ಮಾತನಾಡಿ ರುವ 10 ನಿಮಿಷಗಳ ವಿಡಿಯೋ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ‘ನೀವೆಲ್ಲರೂ ಜಾಗೃತರಾಗಿರಿ, ಪ್ರಾಮಾಣಿಕರಾಗಿರಿ ಮತ್ತು ಧೈರ್ಯವಾಗಿರಿ. ಬಿಜೆಪಿ ನಿಮ್ಮನ್ನು ಸೆಳೆಯಲು ಯತ್ನಿಸಬಹುದು. 10 ಕೋಟಿ ಕೊಡಲು ಮುಂದಾಗಬಹುದು. ಅಂಥ ಕರೆಬಂದರೆ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳಿ. ಹಣ ಪಡೆದುಕೊಂಡರೆ, ಪಶ್ಚಾತ್ತಾಪಪಡಬೇಕಾಗುತ್ತದೆ,’ ಎಂದಿದ್ದಾರೆ ಕೇಜ್ರಿವಾಲ್. ಜತೆಗೆ, ‘ನಾನು ಯಾವತ್ತೂ ಈ ಪರಿಶುದ್ಧ ಪಕ್ಷಕ್ಕೆ ಮತ್ತು ಭ್ರಷ್ಟಾಚಾರ ವಿರೋಧಿ ಚಳವಳಿಗೆ ದ್ರೋಹ ಮಾಡುವುದಿಲ್ಲ ಎಂದು ದೇವರ ಸಾಕ್ಷಿಯಾಗಿ ಹೇಳುತ್ತೇನೆ’ ಎಂದು ಪ್ರಮಾಣ ಮಾಡುವಂತೆಯೂ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ