ಅಂಬೆಗಾಲಿನ ಮಗು ಅಚ್ಚರಿ

ಕೇರಳದ ಘಟನೆ; ಹೆದ್ದಾರಿ ಮೇಲೆ ಬಿದ್ದರೂ ಬದುಕು ಗೆದ್ದ ಕೂಸು

Team Udayavani, Sep 10, 2019, 5:45 AM IST

Child-a

ಇಡುಕ್ಕಿ: ಆಯುಸ್ಸು, ಅದೃಷ್ಟ ಗಟ್ಟಿ ಇದ್ದರೆ ಎಂತಹ ಅಡೆತಡೆಗಳನ್ನೂ ದಾಟಿ ಗೆಲ್ಲಬಹುದು ಎಂಬುದಕ್ಕೆ ಕೇರಳದ ಈ ಒಂದು ವರ್ಷದ ಮಗುವೇ ಸಾಕ್ಷಿ!

ಕೇರಳದ ರಾಜಮಾಲಾ ಎಂಬ ಅರಣ್ಯ ಪ್ರದೇಶದಲ್ಲಿ ಹೀಗೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಇಲ್ಲಿನ ಚೆಕ್‌ಪೋಸ್ಟ್‌ ಬಳಿ ರವಿವಾರ ಮಧ್ಯರಾತ್ರಿ ಸಾಗುತ್ತಿದ್ದ ಒಂದು ಜೀಪಿನಿಂದ ಒಂದು ವರ್ಷದ ಹೆಣ್ಣು ಮಗು ಕೆಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯವಾಗದೆ ಹೆತ್ತವರ ಮಡಿಲು ಸೇರಿದೆ.

ಈ ಮಗುವಿನ ಹೆತ್ತವರು ರಾಜಮಾಲಾ ಚೆಕ್‌ಪೋಸ್ಟ್‌ಗೆ ಹತ್ತಿರವೇ ಇರುವ ಕಂಬಲಿಕ್ಕಂಡಮ್‌ ಎಂಬ ಊರಿನ ನಿವಾಸಿಗಳು. ಇತ್ತೀಚೆಗೆ ಜೀಪಿನಲ್ಲಿ ಸಂಬಂಧಿಕರೊಂದಿಗೆ ತಮಿಳುನಾಡಿನ ಪಳನಿ ದೇವಾಲಯಕ್ಕೆ ತೆರಳಿ, ರವಿವಾರ ರಾತ್ರಿ ತಮ್ಮೂರಿಗೆ ಹಿಂದಿರುಗುತ್ತಿದ್ದರು. ನೂರಾರು ಕಿ.ಮೀ.ಗಳಷ್ಟು ಸುತ್ತಾಡಿ ದಣಿವಾಗಿದ್ದರಿಂದ ಎಲ್ಲರಿಗೂ ನಿದ್ದೆ ಆವರಿಸಿತ್ತು. ಅಂಥ ಹೊತ್ತಿನಲ್ಲಿ ಅಮ್ಮನ ಮಡಿಲ ಮೇಲೆ ಕುಳಿತು ಬೆಚ್ಚಗೆ ನಿದ್ರಿಸುತ್ತಿದ್ದ ಮಗು ಜೀಪಿನಿಂದ ಹೊರಕ್ಕೆ ಬಿದ್ದಿತ್ತು.

ಅಂಬೆಗಾಲಿಡುತ್ತಾ ಸಾಗಿದ ಮಗು
ಮಗುವು ತಲೆಗೆ ಪೆಟ್ಟಾಗಿದ್ದರಿಂದ ಕಿರುಚಾಡಿ ಅಳುತ್ತಾ, ರಸ್ತೆಯ ಮೇಲೆ ಅಂಬೆಗಾಲಿಟ್ಟು ರಸ್ತೆ ಪಕ್ಕದ ಫಾರೆಸ್ಟ್‌ ಪಾತ್‌ ಮೇಲೆ ಬಂದಿತ್ತು. ಅಷ್ಟರಲ್ಲಿ ಮಗು ಅಳುವ ಧ್ವನಿ ಕೇಳಿದ ಚೆಕ್‌ಪೋಸ್ಟ್‌ನ ಸಿಬಂದಿ, ಧ್ವನಿ ಬಂದ ದಿಕ್ಕಿನ ಕಡೆಗೆ ಧಾವಿಸಿ ಬಂದು ಮಗುವನ್ನು ರಕ್ಷಿಸಿದರು. ಈ ದಟ್ಟಾರಣ್ಯದ ರಸ್ತೆಯಲ್ಲಿ ಒಮ್ಮೊಮ್ಮೆ ಆನೆಗಳೂ ಸೇರಿದಂತೆ ವನ್ಯಜೀವಿಗಳು ಸಾಗುತ್ತಿರುತ್ತವೆ. ಆದರೆ ಅದೃಷ್ಟವಶಾತ್‌ ಮಗುವಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸಿಬಂದಿ ಹೇಳಿದ್ದಾರೆ.

ವೈರಲ್ ಆದ ವೀಡಿಯೋ
ಚೆಕ್‌ಪೋಸ್ಟ್‌ ಬಳಿಯಿದ್ದ ಸಿಸಿಟಿವಿಯಲ್ಲಿ ಮಗು ಜೀಪಿನಿಂದ ಬಿದ್ದು ರಸ್ತೆ ದಾಟಿದ ಆಘಾತಕಾರಿ ದೃಶ್ಯವು ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಾಪ್ ನ್ಯೂಸ್

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.