ಪುರಾತನ ಕೃಷಿಗೆ ಭಾಗವತ್ ಕರೆ : ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ
Team Udayavani, Jun 20, 2022, 9:21 PM IST
ನಾಗ್ಪುರ: ಭಾರತದ ಜಿಡಿಪಿ ಅಭಿವೃದ್ಧಿ ಕಾಣಬೇಕೆಂದರೆ ನಾವು ಭಾರತ ಕೇಂದ್ರಿಯ ಕೃಷಿಗೆ ಆದ್ಯತೆ ನೀಡಬೇಕು. ಹೀಗೆಂದು ಹೇಳಿರುವುದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್.
ನಾಗ್ಪುರದಲ್ಲಿ ನವದೆಹಲಿ ಮತ್ತು ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಪಶುವಿಜ್ಞಾನದ ರಾಷ್ಟ್ರೀಯ ಅಕಾಡೆಮಿಯ ಘಟಿಕೋತ್ಸವ ಮತ್ತು ವೈಜ್ಞಾನಿಕ ಸಮಾವೇಶದಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ. “ಕ್ರಿ.ಶ.1700ರವರೆಗೆ ಭಾರತವು ವಿಶ್ವದ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಆ ಮಟ್ಟಕ್ಕೆ ತಲುಪಬೇಕೆಂದರೆ ನಾವು ನಮ್ಮ ಪರಂಪರಾಗತವಾಗಿ ಬಂದಿರುವ ಕೃಷಿ ವಿಧಾನಗಳನ್ನು ಅನುಸರಿಸಬೇಕು. ಅವೈಜ್ಞಾನಿಕವೆಂದು ಸ್ಥಳೀಯ ವಿಧಾನವನ್ನು ತೆಗೆದುಹಾಕಬಾರದು. ನಮ್ಮ ದೇಶದ ಕೃಷಿ ವಿಧಾನಗಳು ಮತ್ತು ಪಶುಸಂಗೋಪನೆ ವಿಧಾನವು ಅತ್ಯಂತ ಪ್ರಾಚೀನವಾದದ್ದು. ಅದರಲ್ಲಿ ಅಡ್ಡ ಪರಿಣಾಮಗಳಿಲ್ಲ. ಆದರೆ ಆಧುನಿಕ ವಿಜ್ಞಾನದಲ್ಲಿ ಅಡ್ಡ ಪರಿಣಾಮಗಳಿವೆ’ ಎಂದು ಅವರು ಹೇಳಿದರು.
ಹಾಗೆಯೇ “ನಮ್ಮ ದೇಶದ ಶೇ.65 ರೈತರು ಸಣ್ಣ ಪ್ರಮಾಣದ ರೈತರು. ಅವರಿಗೆ ಯಾಂತ್ರಿಕತೆ ಫಲಕಾರಿಯಲ್ಲ. ಹಾಗಾಗಿಯೇ ರೈತರು ಹೆಚ್ಚಾಗಿ ಆತ್ಮಹತ್ಯೆ ಸುಳಿಗೆ ಸಿಲುಕುತ್ತಿದ್ದಾರೆ. ಅದನ್ನು ತಪ್ಪಿಸಲು ಸುಸ್ಥಿರ ಕೃಷಿ ವಿಧಾನಗಳನ್ನು ನಾವು ಅವರಿಗೆ ಹೇಳಿಕೊಡಬೇಕಿದೆ’ ಎಂದೂ ಭಾಗವತ್ ತಿಳಿಸಿದ್ದಾರೆ.
ಇದನ್ನೂ ಓದಿ : ಯುಯುಸಿಎಂಎಸ್ ವೆಬ್ಸೈಟ್ ಮೂಲಕ ಆನ್ಲೈನ್ ಪ್ರವೇಶ ಪ್ರಕ್ರಿಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ