Moon, ಸೂರ್ಯ ಆಯ್ತು; ಈಗ ನಕ್ಷತ್ರಪುಂಜದತ್ತ ಇಸ್ರೋ ಕಣ್ಣು!
ಎಕ್ಸ್ಪೋಸ್ಯಾಟ್ ಯೋಜನೆ ಕುರಿತು ಬಹಿರಂಗಪಡಿಸಿದ ಇಸ್ರೋ
Team Udayavani, Sep 5, 2023, 6:45 AM IST
ನವದೆಹಲಿ: ಚಂದ್ರ ಮತ್ತು ಸೂರ್ಯನ ಬಳಿಕ ಈಗ ಇಸ್ರೋದ ಗಮನ ನಕ್ಷತ್ರಪುಂಜದತ್ತ ನೆಟ್ಟಿದೆ. ಬ್ರಹ್ಮಾಂಡದಲ್ಲಿನ ಕೆಲವು ನಿಗೂಢ ರಹಸ್ಯಗಳನ್ನು ಭೇದಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ತನ್ನ ಮುಂದಿನ ಯೋಜನೆಯ ಕುರಿತ ಮಾಹಿತಿ ಬಹಿರಂಗಪಡಿಸಿದೆ.
ಚಂದ್ರಯಾನ-3 ಮತ್ತು ಆದಿತ್ಯ ಎಲ್1 ಯಶಸ್ಸಿನ ಬೆನ್ನಲ್ಲೇ ಪ್ರಕಾಶಮಾನವಾದ ಖಗೋಳ ಎಕ್ಸ್ ಕಿರಣಗಳ ಮೂಲಗಳ ಹಿಂದಿನ ರಹಸ್ಯವನ್ನು ಅರಿಯುವ “ಎಕ್ಸ್ಪೋಸ್ಯಾಟ್'(ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಪ್ರಾಜೆಕ್ಟ್ ಬಗ್ಗೆ ಇಸ್ರೋ ಘೋಷಿಸಿದೆ.
ನಮ್ಮ ತಾರಾಪುಂಜವು ಎಕ್ಸ್ ಕಿರಣಗಳಿಂದ ತುಂಬಿ ಹೋಗಿದೆ. ಈ ಪೈಕಿ ಬಹುತೇಕ ಕಿರಣಗಳು ನಮಗೆ ಕಾಣಿಸುವುದಿಲ್ಲ. ಇವುಗಳ ಮೂಲ ಯಾವುದು ಎಂಬುದೂ ತಿಳಿದಿಲ್ಲ. ಈ ಪ್ರಾಚೀನ ರಹಸ್ಯವು ಹಲವಾರು ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡಿದ್ದೂ ಇದೆ. ಈಗ ಎಕ್ಸ್ಪೋಸ್ಯಾಟ್ ಯೋಜನೆ ಮೂಲಕ ಈ ಎಕ್ಸ್ ಕಿರಣಗಳು ಮತ್ತು ಬೆಳಕುಗಳ ಕುರಿತು ಅಧ್ಯಯನ ನಡೆಸುವ ಲೆಕ್ಕಾಚಾರ ಇಸ್ರೋದ್ದು.
ಪ್ರಮುಖ ಪೇಲೋಡ್ಗಳು
ಭೂಮಿಯ ಕೆಳ ಕಕ್ಷೆಯನ್ನು ತಲುಪಲಿರುವ ಈ ಬಾಹ್ಯಾಕಾಶನೌಕೆಯಲ್ಲಿ ಎರಡು ಪ್ರಮುಖ ವೈಜ್ಞಾನಿಕ ಸಲಕರಣೆಗಳು ಇರುತ್ತವೆ. ಈ ಪೈಕಿ ಒಂದು ಪಾಲಿಕ್ಸ್(ಪೋಲಾರಿಮೀಟರ್ ಇನ್ಸ್ಟ್ರೆಮೆಂಟ್ ಇನ್ ಎಕ್ಸ್-ರೇಸ್). ಧ್ರುವೀಕರಣದ ಮಟ್ಟ, ಕೋನ ಸೇರಿದಂತೆ ಧ್ರುವೀಯ ಮಾನದಂಡವನ್ನು ಅಳೆಯಲು ಸಾಧ್ಯವಾಗುವಂತೆ ಪಾಲಿಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಧ್ಯಮ ಪ್ರಮಾಣದ(8-30 ಕಿಲೋ ಎಲೆಕ್ಟ್ರಾನ್ ವೋಲ್ಟ್) ಎಕ್ಸ್-ರೇ ಶಕ್ತಿಯತ್ತ ಗಮನ ಕೇಂದ್ರೀಕರಿಸಿರುತ್ತದೆ. ಎರಡನೆಯದ್ದು, ಎಕ್ಸ್ಸ್ಪೆಕ್ಟ್(ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಆ್ಯಂಡ್ ಟೈಮಿಂಗ್) ಸಾಧನ. ಇದು 0.8ರಿಂದ 15 ಕಿಲೋ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ದತ್ತಾಂಶಗಳನ್ನು ಒದಗಿಸುತ್ತದೆ.
ವಿಶೇಷ ಏಕೆ?
ಕಪ್ಪು ರಂಧ್ರಗಳು, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ತಾರಾಪುಂಜಗಳ ನಾಭಿ, ಪಲ್ಸರ್ ವಿಂಡ್ ನೆಬ್ಯುಲೆ ಸೇರಿದಂತೆ ವಿವಿಧ ಆಕಾಶಕಾಯಗಳ ಕುರಿತು ನಮಗರಿವಿಲ್ಲದ ಕೆಲವು ಮಾಹಿತಿಗಳನ್ನು ಅರಿಯುವುದು ಇಸ್ರೋ ಉದ್ದೇಶವಾಗಿದೆ. ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಟೈಮಿಂಗ್ ದತ್ತಾಂಶಗಳ ಮೂಲಕ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯಗಳು ಈ ಆಕಾಶಕಾಯಗಳ ಹೊರಸೂಸುವಿಕೆಯ ಕುರಿತು ಸಾಕಷ್ಟು ಒಳನೋಟಗಳನ್ನು ನೀಡಿದ್ದರೂ, ಈ ಹೊರಸೂಸುವಿಕೆಯ ನಿಖರ ಸ್ವರೂಪವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅದನ್ನು ಕಂಡುಹಿಡಿಯುವುದೇ ಇಸ್ರೋ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ