ಮುಂಬಯಿ: ಭಾರೀ ಅಲೆಗಳಿಗೆ ಸಿಲುಕಿ ಇಬ್ಬರು ಸಮುದ್ರ ಪಾಲು, ಶೋಧ ಕಾರ್ಯಾಚರಣೆ
Team Udayavani, Jul 6, 2019, 7:14 PM IST
ಮುಂಬಯಿ : ಮುಂಬಯಿಯ ಮೆರೈನ್ ಡ್ರೈವ್ ಸಮೀಪ ಇಬ್ಬರು ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿ ಮುಳುಗಿರುವ ಘಟನೆ ಇಂದು ಶನಿವಾರ ಮಧ್ಯಾಹ್ನ ನಡೆದಿದೆ.
ಸಮುದ್ರದಲ್ಲಿ ಮುಳುಗಿರುವವರಲ್ಲಿ ಒಬ್ಟಾತ 26ರ ಹರೆಯದ ತರುಣ ಮತ್ತು ಇನ್ನೋರ್ವ ಎಂಟು ವರ್ಷದ ಬಾಲಕ ಎಂದು ಹೇಳಲಾಗಿದೆ. ಇವರಿಗಾಗಿ ಶೋಧ ಕಾರ್ಯಾಚರಣೆ ಈಗ ಸಾಗುತ್ತಿದೆ.
ಇಂದು ಶನಿವಾರ ಮಧ್ಯಾಹ್ನ 2.11ರ ಹೊತ್ತಿಗೆ ಮೆರೈನ್ ಲೈನ್ಸ್ ನಲ್ಲಿ 4.74 ಮೀಟರ್ ಎತ್ತರದ ಹೆದ್ದೆರೆಗಳು ಬಂದಾಗ ಇಬ್ಬರು ಸಮುದ್ರದಲ್ಲಿ ಮುಳುಗಿದ ಘಟನೆ ನಡೆಯಿತು. ಇದೇ ವೇಳೆ ಮುಂಬಯಿ ಮಹಾ ನಗರಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಇಬ್ಬರು ಸಮುದ್ರದಲ್ಲಿ ಮುಳುಗಿದ ಸುದ್ದಿ ತಿಳಿದೊಡನೆಯೇ ನೌಕಾ ಪಡೆಯ ಮುಳುಗುಗಾರರು ರಕ್ಷಣಾ ಕಾರ್ಯಾಚರಣೆಯನ್ನು ಸೇರಿಕೊಂಡರು. ಸಮುದ್ರದಲ್ಲಿ ನಿರಂತರವಾಗಿ ಎದ್ದು ಬರುತ್ತಿದ್ದ ಹೆದ್ದೆರೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತಡೆ ಉಂಟಾಯಿತು.
ಸಮುದ್ರದಲ್ಲಿ ಮಧ್ಯಾಹ್ನ 2ರಿಂದ 3ರ ತನಕ ಹೆದ್ದೆರೆಗಳು ಏಳುವ ಸಂಭಾವ್ಯತೆ ಇರುವುದರಿಂದ ಯಾರೂ ಸಮುದ್ರ ಕಿನಾರೆಗೆ ಹೋಗಬಾರದು ಎಂಬ ಎಚ್ಚರಿಕೆಯನ್ನು ಇಂದು ಶನಿವಾರ ಬೆಳಗ್ಗೆಯೇ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ (ಬಿಎಂಸಿ) ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ